Advertisement

Arrested: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದವ ಬಂಧನ

09:39 AM Mar 13, 2024 | Team Udayavani |

ಬೆಂಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ಮಗಳನ್ನು ಎಳೆದಾಡಿದ್ದ ಬಿಹಾರ ಮೂಲದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

Advertisement

ಪಟ್ಟೇಗಾರ ಪಾಳ್ಯದ ನಿವಾಸಿ ಬಿಹಾರ ಮೂಲದ ಶಂಕರ್‌ ಬಂಧಿತ ಆರೋಪಿ. ಟೈಲ್ಸ್‌ ಹಾಕುವ ಕೆಲಸಮಾಡಿಕೊಂಡಿದ್ದ ಆರೋಪಿ ಶಂಕರ್‌ ಮಾ.7 ರಂದು ರಾತ್ರಿ 10.30ರಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ತನ್ನ ಮನೆ ಬಳಿ ಬಂದಿದ್ದ. ಆ ಸಂದರ್ಭದಲ್ಲಿ ಪಕ್ಕದ ಮನೆಯ ನಾಯಿ ಬೊಗಳುತ್ತಿದ್ದಾಗ, ಶಂಕರ್‌ ಹಾಗೂ ಸ್ನೇಹಿತರು ನಾಯಿ ಮೇಲೆ ಹಲ್ಲೆ ನಡೆಸಿ ಜಗಳ ಮಾಡುತ್ತಿದ್ದರು. ನಾಯಿ ಸಾಕಿದ್ದ ಮನೆ ಮಾಲೀಕರು ಹೊರಗೆ ಬಂದು ಈ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ಮಾಲೀಕರ ಮೇಲೆಯೇ ಹಲ್ಲೆ ನಡೆಸಿದ್ದಾರೆ. 2ನೇ ವರ್ಷದ ಬಿ.ಕಾಂ ಓದುತ್ತಿರುವ 20 ವರ್ಷದ ಮನೆ ಮಾಲೀಕರ ಮಗಳು ಅಪ್ಪನ ರಕ್ಷಣೆಗೆ ಬಂದಾಗ, ಆರೋಪಿಗಳ ಗುಂಪು ಆಕೆಯನ್ನೂ ಹಿಡಿದು ಎಳೆದಾಡಿದೆ.

ಇದನ್ನು ಸೆರೆಹಿಡಿದಿದ್ದ ವಿದ್ಯಾರ್ಥಿನಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ವಿಡಿಯೋ ಕಳುಹಿಸಿ, ನ್ಯಾಯ ಕೊಡಿಸುವಂತೆ ಕೋರಿಕೊಂಡಿದ್ದಳು. ವಿಚಾರ ತಿಳಿದು ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಆರೋಪಿ ಶಂಕರ್‌ನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next