Advertisement

ಕಾಡುಹಂದಿ ಬೇಟೆಯಾಡಲು ಹೊಂಚುಹಾಕಿ ಕುಳಿತಿದ್ದ ಇಬ್ಬರ ಬಂಧನ: ನಾಡ ಬಂದೂಕು ವಶ

06:50 PM Jul 19, 2023 | Team Udayavani |

ಹನೂರು: ತೋಟದಲ್ಲಿ ಕಾಡುಹಂದಿ ಬೇಟೆಯಾಡಲು ಹೊಂಚುಹಾಕಿ ಕುಳಿತಿದ್ದ ಇಬ್ಬರನ್ನು ಬಂಧಿಸಿ ಒಂದು ನಾಡ ಬಂದೂಕು ವಶಪಡಿಸಿಕೊಳ್ಳುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಹನೂರು ಪಟ್ಟಣದ 13ನೇ ವಾರ್ಡಿ ಆರ್.ಎಸ್.ದೊಡ್ಡಿ ನಿವಾಸಿಗಳಾದ ಸಿದ್ದಪ್ಪಶೆಟ್ಟಿ(54) ಮತ್ತು ಬಸವರಾಜು (43) ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರೂ ಆರೋಪಿಗಳು ಎಡಳ್ಳಿದೊಡ್ಡಿ ರಸ್ತೆಯ ಜಮೀನೊಂದರಲ್ಲಿ ಕಾಡುಹಂದಿಯನ್ನು ಬೇಟೆಯಾಡಲು ಹೊಂಚುಹಾಕಿ ಕುಳಿತಿದ್ದರು.

ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡು ಈ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡು ಬಾಳೆಗಿಡದ ಕೆಳಗೆ ಅವಿತುಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸುತ್ತುವರೆದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಅವರ ಬಳಿಯಿದ್ದ ಒಂದು ನಾಡಬಂದೂಕು, ಲೋಡ್ ಮಾಡಲಾಗಿದ್ದ ಮದ್ದುಗಳನ್ನು ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾಳಿಯಲ್ಲಿ ಪೇದೆಗಳಾದ ರಾಘವೇಂದ್ರ, ಚಂದ್ರು, ಮಣಿಕಂಠ, ರಾಮಕೃಷ್ಣ, ರಾಜು ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next