Advertisement

ಹಸುಗಳೊಂದಿಗೆ ಅಸಹಜ ಲೈಂಗಿಕ ಕ್ರಿಯೆ: ಆರೋಪಿ ಬಂಧನ

07:42 PM Feb 24, 2022 | Team Udayavani |

ಬೆಂಗಳೂರು: ಗೋವುಗಳ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವಿಕೃತ ವ್ಯಕ್ತಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

Advertisement

ದಾವಣಗೆರೆ ಮೂಲದ ವೆಂಕಟೇಶ್‌ (22) ಬಂಧಿತ. ಆರೋಪಿ ಸಿಂಗಾಪುರ ಲೇಔಟ್‌ನ ಮುನಿ ಹನುಮಂತಪ್ಪ ಎಂಬವರಿಗೆ ಸೇರಿದ ಹಸುವಿನ ಜತೆ ಅಸಹಜ ಕ್ರಿಯೆ ನಡೆಸುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.

ಸಿಂಗಾಪುರ ಲೇಔಟ್‌ನಲ್ಲಿ ಮುನಿ ಹನುಮಂತಪ್ಪ ಐದಾರು ಹಸುಗಳನ್ನು ಸಾಕಿದ್ದಾರೆ. ಮನೆ ಮುಂಭಾಗದ ಸ್ಥಳದಲ್ಲಿಯೇ ಗೋವುಗಳಿಗೆ ಕೊಟ್ಟಿಗೆ ನಿರ್ಮಿಸಿಕೊಳ್ಳಲಾಗಿದೆ. ಫೆ. 19ರಂದು ರಾತ್ರಿ ವೇಳೆ ಆರೋಪಿ ವೆಂಕಟೇಶ್‌ ಗೋವುಗಳ ಜತೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅದನ್ನು ಗಮನಿಸಿದ ಸ್ಥಳೀಯರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅದರಿಂದ ಅಚ್ಚರಿಗೊಂಡ ಹನುಮಂತಪ್ಪ ಮರು ದಿನ ರಾತ್ರಿಯಿಡಿ ಕಾಯ್ದುಕೊಂಡು ಕುಳಿತಿದ್ದರು. ಆಗ ಕೊಟ್ಟಿಗೆಗೆ ಬಂದ ಆರೋಪಿ, ವಿವಸ್ತ್ರನಾಗಿ ಕೊಟ್ಟಿಗೆಯಲ್ಲಿ ಹಸುಗಳ ಜತೆ ವಿಕೃತವಾಗಿ ವರ್ತಿಸಿದ್ದಾನೆ. ಆರೋಪಿಯನ್ನು ಸ್ಥಳದಲ್ಲೇ ಹಿಡಿದುಕೊಂಡು, ಪೊಲೀಸರಿಗೆ ಮಾಹಿತಿ ನೀಡದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಹಾಗೂ ಜಾನುವಾರುಗಳ ಮೇಲೆ ದೌರ್ಜನ್ಯ ಕಾಯ್ದೆ ಅಡಿ  ಪ್ರಕರಣ ದಾಖಲಿಸಿಕೊಂಡು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ದಾವಣಗೆರೆಯಿಂದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಅವಿನ್ಯೂ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next