Advertisement

ರೌಡಿಶೀಟರ್‌ ಸಹಚರ ಬಂಧನ

06:34 AM Feb 04, 2019 | |

ಬೆಂಗಳೂರು: ಇತ್ತೀಚೆಗೆ ಯಶವಂತಪುರದ ಮಾಡೆಲ್‌ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಾವಿಜನ್‌ ಸ್ಟೋರ್‌ ಮಾಲೀಕ ವಿನೋದ್‌ ಕುಮಾರ್‌ ಎಂಬುವವರನ್ನು ಹತ್ಯೆಗೈದಿದ್ದ ರೌಡಿಶೀಟರ್‌ ಗೌತಮ್‌ ಸಹಚರನನ್ನು ಯಶವಂತಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Advertisement

ಮಾಡೆಲ್‌ ಕಾಲೋನಿ ನಿವಾಸಿ ಸಲ್ಮಾನ್‌ (24) ಬಂಧಿತ. ಸಲ್ಮಾನ್‌, ರೌಡಿಶೀಟರ್‌ ಗೌತಮ್‌ ಹಾಗೂ ಸ್ನೇಹಿತ ಪ್ರಶಾಂತ್‌ ಜತೆ ಸೇರಿ ಜ.24ರಂದು ಮಾಡೆಲ್‌ ಕಾಲೋನಿಯ ಪೈಪ್‌ಲೈನ್‌ ರಸ್ತೆಯಲ್ಲಿ ಪ್ರಾವಿಜನ್‌ ಸ್ಟೋರ್‌ ಮಾಲೀಕ ವಿನೋದ್‌ ಕುಮಾರ್‌ ಹಾಗೂ ತರಕಾರಿ ವ್ಯಾಪಾರಿ ಮಾರುತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿನೋದ್‌ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಶವಂತಪುರ ಪೊಲೀಸರು ಜ.27ರಂದು ಗೌತಮ್‌ನನ್ನು ಆರ್‌ಎಂಸಿ ಯಾರ್ಡ್‌ನ ಪ್ಲಾಟಿನಂ ಸಿಟಿ ಬಳಿಯ ಪೈಪ್‌ಲೈನ್‌ ರಸ್ತೆಯಲ್ಲಿ ಗುಂಡು ಹಾರಿಸಿ ಬಂಧಿಸಿದ್ದರು. ಗೌತಮ್‌ ಮಾಹಿತಿ ಮೇರೆಗೆ ಸಲ್ಮಾನ್‌ನನ್ನು ಬಂಧಿಸಲಾಗಿದೆ. ಮತ್ತೂಬ್ಬ ಆರೋಪಿ ಪ್ರಶಾಂತ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next