Advertisement

ಅಬೂಬಕ್ಕರ್‌ ಸಿದ್ಧಿಕ್‌ ಕೊಲೆ ಆರೋಪಿಯ ಸೆರೆ

09:35 PM Mar 05, 2023 | Team Udayavani |

ಕುಂಬಳೆ : ಕಳೆದ ಜೂ.26ರಂದು ಸೀತಾಂಗೋಳಿಯ ಮುಗು ನಿವಾಸಿ ಪ್ರವಾಸಿ ಅಬೂಬಕ್ಕರ್‌ ಸಿದ್ಧಿಕ್‌ (32) ಅವರನ್ನು ಕೊಲೆಗೈದ ತಂಡದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸಿದ್ಧಿಕ್‌ ಅವರನ್ನು ಬಾಡಿಗೆ ಗೂಂಡಾ ತಂಡವು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಪೈವಳಿಕೆ ಅಜ್ಞಾತ ಸ್ಥಳದ ಮನೆಯೊಂದರಲ್ಲಿ ಕೂಡಿ ಹಾಕಿ ಬಳಿಕ ಹತ್ತಿರದ ಮರಕ್ಕೆ ಕಟ್ಟಿ ಮಾರಕ ಹಲ್ಲೆ ನಡೆಸಿ ಕೊಲೆಗೈದು ಬಂದ್ಯೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಿ ಪರಾರಿಯಾದ ತಂಡದ ಮುಖ್ಯ ಆರೋಪಿ ಅಬ್ದುಲ್‌ ಜಲೀಲ್‌ (35) ನನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮಂಜೇಶ್ವರ ಠಾಣೆಯ ಎಸ್‌ಐ ಸಂತೋಷ್‌ ಕುಮಾರ್‌ ನೇತೃತ್ವದ ತಂಡ ಬಂಧಿಸಿದೆ. ಜಲೀಲ್‌ ಕೊಲೆ ನಡೆಸಿದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದು ಶನಿವಾರ ವಿದೇಶದಿಂದ ಮರಳುತ್ತಿರುವಾಗ ಈತನನ್ನು ಬಂಧಿಸಲಾಗಿದೆ. ಈತನ ಪತ್ತೆಗಾಗಿ ಪೊಲೀಸರು ಲುಕ್‌ಔಟ್‌ ನೋಟಿಸು ಪ್ರಕಟಿಸಿದ್ದರು. ಕೇಸಿನಲ್ಲಿ ಒಟ್ಟು 19 ಮಂದಿ ಆರೋಪಿಗಳೆಂದು ಕೇಸು ದಾಖಲಾಗಿದೆ. ಇದರಲ್ಲಿ ಐವರಿಗೆ ಜಾಮೀನು ಲಭಿಸಿದ್ದು ನಾಲ್ವರು ಜೈಲಿನಲ್ಲಿ ಬಂಧನದಲ್ಲಿರುವರು. ಪ್ರಕರಣದಲ್ಲಿ ಪಿಎಂ ಅಬ್ದುಲ್‌ ಜಲೀಲ್‌ 10ನೇ ಆರೋಪಿಯಾಗಿದ್ದನು. ಉಳಿದ ಆರೋಪಿಗಳು ಇನ್ನೂ ತಲೆ ಮರೆಸಿಕೊಂಡಿರುವರು.

Advertisement

Udayavani is now on Telegram. Click here to join our channel and stay updated with the latest news.

Next