Advertisement

ಪತ್ನಿ ಕೊಂದ ಪತಿ 17 ವರ್ಷಗಳ ನಂತರ ಸೆರೆ

06:41 PM Feb 09, 2021 | Team Udayavani |

ಲಕ್ಷ್ಮೇಶ್ವರ: ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಭೀಕರ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪಾಪಿ ಪತಿ 17 ವರ್ಷಗಳ ನಂತರ ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದಾನೆ.

Advertisement

ಘಟನೆ ವಿವರ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅಂಕಲಿ ಗ್ರಾಮದಲ್ಲಿ 2004ರ ಡಿ.16 ರಂದು ವೀರಯ್ಯ ಹಿರೇಮಠ ಎಂಬಾತ ಪತ್ನಿ ಈರಮ್ಮಳನ್ನು ಶೀಲ ಶಂಕಿಸಿ ಆಕೆಯನ್ನು ಗ್ರಾಮದ ಹತ್ತಿರದ ಹಳ್ಳಕ್ಕೆ  ಕರೆದುಕೊಂಡು ಹೋಗಿ ಕೊಡಲಿಯಿಂದ ಕತ್ತರಿಸಿ ಕೊಲೆ ಮಾಡಿದ್ದ.

ಇದನ್ನು ಓದಿ :ಯಾದಗಿರಿ: ಲಂಚ ಪಡೆಯುತ್ತಿದ್ದ ಸರ್ವೆಯರ್ ಎಸಿಬಿ ಬಲೆಗೆ

9 ದಿನಗಳ ನಂತರ ಗ್ರಾಮಸ್ಥರ ಕಣ್ಣಿಗೆ ಬಿದ್ದ ದೇಹ, ಬಟ್ಟೆಯಿಂದ ಇದು ಈರಮ್ಮಳ ಶವ ಎಂದು ಪತ್ತೆ ಮಾಡಿದ್ದಾರೆ. ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 17 ವರ್ಷಗಳ ಕಾಲ ಕೊಲೆಗಡುಕ ಪತಿ ಪತ್ತೆಯಾಗಿರಲಿಲ್ಲ. 17 ವರ್ಷಗಳ ಬಳಿಕ ಎಸ್ಪಿ ಎನ್‌.ಯತೀಶ್‌ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಠಾಣೆ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ನೇತೃತ್ವದಲ್ಲಿ ಎಎಸ್‌ಐ ಟಿ.ಕೆ. ರಾಠೊಡ್‌, ಸಿ.ಎನ್‌. ಕಾಕನೂರ (ಸಿಪಿಸಿ) ಮಂಗಳೂರಿನಲ್ಲಿ ಈತನನ್ನು ದಸ್ತಗೀರ ಮಾಡಿ ಫೆ.6ಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next