Advertisement

ಸಾವಿನ ಪರ್ವತ ಶ್ರೇಣಿಗೊಂದು ಸುತ್ತು!

04:30 PM May 17, 2018 | Team Udayavani |

ಹಲಸು, ಅನಾನಸು ಹಣ್ಣಿನ ಘಮ… ಕರಿಮೆಣಸು, ಏಲಕ್ಕಿ ಘಾಟು… ಹಸಿರು ಹೊದಿಕೆಯ ರಂಗು…
ತಮಿಳುನಾಡಿನ ನಮಕ್ಕಲ್‌ ಜಿÇÉೆಗೆ ಸೇರಿದ ಕೊಲ್ಲಿ ಎನ್ನುವ ಊರಿನ ಬೆಟ್ಟ ಸಾಲುಗಳಲ್ಲಿ ಸಂಚರಿಸುತ್ತಿದ್ದರೆ ಈ ಎÇÉಾ ಅನುಭವಗಳು ಸಿಗುತ್ತವೆ. ಅಲ್ಲಿಗೆ ತಲುಪಬೇಕಾದರೆ 70 ಹೇರ್‌ಪಿನ್‌ ತಿರುವುಗಳನ್ನು ದಾಟಿ ಹೋಗಬೇಕು. ಅದರ ಥ್ರಿಲ್ಲಿಂಗ್‌ ಅನುಭವವೇ ಬೇರೆ. ಈ ಶಿಖರ ಶ್ರೇಣಿ 1000-1300 ಮೀಟರ್‌ಗಳಷ್ಟು ಎತ್ತರ ಇವೆ. ಮಲಿನಗೊಳ್ಳದೇ ಉಳಿದಿರುವ ಈ ಗಿರಿಧಾಮವನ್ನು ಹಿಂದಿನ ಕಾಲದಲ್ಲಿ “ಸಾವಿನ ಬೆಟ್ಟಗಳು’ ಎಂದು ಕರೆಯುತ್ತಿದ್ದರಂತೆ. ಸಹಜ ಪ್ರಕೃತಿ ಸೌಂದರ್ಯಕ್ಕೆ ಮನ ಒಡ್ಡುವ ಮನಸ್ಸಿರುವವರನ್ನು ಕರೆಯುವ ಈ ಗಿರಿಗಳಲ್ಲಿ ಶಾಂತ ಪರಿಸರ ಮನೆಮಾಡಿದೆ.

Advertisement

ಹೆಜ್ಜೆಗೊಂದು ಜಲಪಾತ
ಕಾಫಿ, ಚಹಾ, ಏಲಕ್ಕಿ ತೋಟಗಳ ಅಂದ, ಹಲಸು, ಸೀಬೆ, ಅನಾನಸ್‌ ಹಣ್ಣುಗಳನ್ನು ಈ ಪ್ರಾಂತ್ಯದಲ್ಲಿ ನೋಡಬಹುದು. ಅಷ್ಟೇ ಅಲ್ಲ ಅವುಗಳ ರುಚಿಯನ್ನೂ ಸವಿಯಬಹುದು. ಚಾರಣಕ್ಕೆ ಹೇಳಿ ಮಾಡಿಸಿದ ಹಾಗಿರುವ ಕೊಲ್ಲಿ ಬೆಟ್ಟಗಳಲ್ಲಿ “ಸೆಮ್ಮೆದುಮುಥಂಕುಲಂ’ ಸರೋವರ ಇದೆ. ಅಲ್ಲಿ ದೋಣಿ ವಿಹಾರಕ್ಕೆ ಅವಕಾಶವಿದೆ. ಅಲ್ಲದೆ ಪ್ರವಾಸಿಗರು ಸರೋವರದ ಬಳಿಯಲ್ಲೇ ಇರುವ ಉದ್ಯಾನವನದಲ್ಲಿ ಅಡ್ಡಾಡಬಹುದು. ಗಿರಿಧಾಮವನ್ನು ಸುತ್ತಲು ಹೊರಡುವವರಿಗೆ ಆಶ್ಚರ್ಯವಾಗೋದು ಖಂಡಿತ. ಏಕೆಂದರೆ ಇಲ್ಲಿ ಹೆಜ್ಜೆಗೊಂದು ಜಲಪಾತ ಸಿಗುತ್ತದೆ. 

ಸುಗ್ರೀವ ಆಳುತ್ತಿದ್ದ ಬೆಟ್ಟ
ಜಲಪಾತಗಳು ಮಾತ್ರವಲ್ಲ, ಪ್ರವಾಸಿಗರು ಹತ್ತಿರದಲ್ಲೇ ಇರುವ ಅರಪ್ಪಲೀಶ್ವರ ದೇವಾಲಯಕ್ಕೂ ಭೇಟಿ ನೀಡಬಹುದಾಗಿದೆ. ಹತ್ತಿರದ ರಾಸಿಪುರಂನಲ್ಲಿ ಪ್ರಾಚೀನ ಶಿವ ದೇವಾಲಯವೊಂದಿದೆ. ಜೈನ ದೇವಾಲಯವೂ ಇದೆ. “ಮಧುವನಂ’ ಹೆಸರಿನ ರಾಮಾಯಣದ ಸುಗ್ರೀವ ಆಳುತ್ತಿದ್ದ ಬೆಟ್ಟವೂ ಇದೆ. ನಮ್ಮಲ್ಲಿ ಆಗುಂಬೆ ಸೂರ್ಯಾಸ್ತದ ಸೌಂದರ್ಯವನ್ನು ಸವಿಯಲು ವ್ಯೂ ಪಾಯಿಂಟು ಇರುವಂತೆ ಇಲ್ಲಿ ಎರಡು ವ್ಯೂ ಪಾಯಿಂಟುಗಳಿವೆ. “ಸೀಕುಪರೈ’ ಮತ್ತು “ಸೆಲುರ್ನಾಡು’ ಹೆಸರಿನ ಈ ವ್ಯೂ ಪಾಯಿಂಟ್‌ಗಳಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವ ಮಜವೇ ಬೇರೆ. ಕಾಡು ನಾಯಿ, ಕರಡಿ, ಜಿಂಕೆ, ಹುಲಿಗಳ ನೆಲೆಯಾಗಿರುವ ಕೊಲ್ಲಿ ಬೆಟ್ಟದಲ್ಲಿ ಆಕಾಶ ಗಂಗೈ ಹೆಸರಿನ 300 ಅಡಿ ಎತ್ತರದಿಂದ ಬೀಳುವ ಜಲಪಾತವೂ ಇದೆ. 

– ಪುರುಷೋತ್ತಮ್‌ ವೆಂಕಿ

Advertisement

Udayavani is now on Telegram. Click here to join our channel and stay updated with the latest news.

Next