Advertisement

ಕೋವಿಡ್ ಜಾಗೃತಿ ವಹಿಸದಿದ್ದರೆ ಅಪಾಯ

06:21 PM Oct 20, 2020 | Suhan S |

ಸಿಂಧನೂರು: ವಿಶ್ವದಲ್ಲಿ ಮಾರಕ ರೋಗವಾಗಿರುವ ಕೋವಿಡ್ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸದೆಹೋದರೆ ಮುಂದೆ ದೊಡ್ಡ ಅನಾಹುತಕ್ಕೆತುತ್ತಾಗಬೇಕಾಗುತ್ತದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

Advertisement

ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ನಗರ ಹಾಗೂ ಗ್ರಾಮೀಣಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಹಸ್ತಕಾರ್ಯಕ್ರಮ ಹಾಗೂ ಸ್ವಯಂಸೇವಕರಿಗೆ ಕೋವಿಡ್‌ 19 ತಪಾಸಣಾತರಬೇತಿ ಮತ್ತು ಯುವ ಕಾಂಗ್ರೆಸ್‌ ಚುನಾವಣೆ ಸದಸ್ಯತ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾರಕ ರೋಗದಿಂದಆರೋಗ್ಯವಾಗಿರಲು ಮೊದಲು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕ. ಪರಿಸರದಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಒಳ್ಳೆಯ ಆಹಾರ ಸೇವನೆ ಮಾಡುವುದರಿಂದಆರೋಗ್ಯವಂತ ರಾಗಿರಲು ಸಾಧ್ಯ ಎಂದರು.

ಯುವ ಕಾಂಗ್ರೆಸ್‌ ಕಾರ್ಯಕರ್ತರು ಸದಸ್ಯತ್ವ ಅಭಿಯಾನ ಪ್ರಾರಂಭವಾಗಿರುತ್ತದೆ. ಪ್ರತಿಯೊಬ್ಬರು ಸದಸ್ಯತ್ವ ಪಡೆದು ಪಕ್ಷ ಸಂಘಟನೆಗೆ ಮುಂದಾಗಬೇಕುಎಂದರು. ತಾಲೂಕು ಆರೋಗ್ಯ ವೈದ್ಯ ಅಧಿ ಕಾರಿಡಾ.ನಾಗರಾಜ ಪಾಟೀಲ್‌ ಮಾತನಾಡಿ, ಆರೋಗ್ಯದ ಬಗ್ಗೆ ಈಗಾಗಲೇ ಆರೋಗ್ಯಇಲಾಖೆಯಿಂದ ಅನೇಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಆದರೂ ಮಾಸ್ಕ್ ಧರಿಸದೆ ಸಾಮಾಜಿಕ ಅಂತರಸಾರ್ವಜನಿಕರು ಕಾಪಾಡದೆ ಆರೋಗ್ಯಕ್ಕೆ ಹಾನಿ ಉಂಟು ಮಾಡಿಕೊಳ್ಳುತ್ತಿದ್ದಾರೆ ಎಂದರು.

ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾಜಿಮಲ್ಲಿಕ್‌ ವಕೀಲ, ನಗರಸಭಾ ಮಾಜಿ ಅಧ್ಯಕ್ಷ ಜಾಫರ್‌ ಸಾಬ್‌, ಜಿಪಂ ಸದಸ್ಯ ಬಾಬುಗೌಡ ಬಾದರ್ಲಿ, ಅಮರೇಶ ಗುರಿಕಾರ್‌, ಅನಿಲ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next