Advertisement

ಕಿಶ್ತ್ವಾರ್ ನಲ್ಲಿ ಕರ್ಫ್ಯೂ, ಉದ್ವಿಗತೆ;ಸೇನೆಯಿಂದ ಫ್ಲ್ಯಾಗ್‌ ಮಾರ್ಚ್

12:07 PM Nov 02, 2018 | Team Udayavani |

ಜಮ್ಮು : ನಿನ್ನೆ ಗುರುವಾರ ರಾತ್ರಿ ಶಂಕಿತ ಭಯೋತ್ಪಾದಕರು ಹಿರಿಯ ಬಿಜೆಪಿ ನಾಯಕ ಮತ್ತು ಅವರ ಸಹೋದರನನ್ನು ಗುಂಡಿಕ್ಕಿ ಕೊಂದುದನ್ನು ಅನುಸರಿಸಿ ಉದ್ರಿಕ್ತತೆ ತಲೆದೋರಿರುವ ಕಾರಣ ಕರ್ಫ್ಯೂ ವಿಧಿಸಲ್ಪಟ್ಟಿರುವ ಜಮ್ಮು ಕಾಶ್ಮೀರದ ಕಿಶ್ತ್ವಾರ್  ಪಟ್ಟಣದಲ್ಲಿ  ಸೇನೆ ಇಂದು ಶುಕ್ರವಾರ ಫ್ಲ್ಯಾಗ್‌ ಮಾರ್ಚ್‌ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಕಿಶ್ತ್ವಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಂಗ್ರೇಜ್‌ ಸಿಂಗ್‌ ರಾಣಾ ಅವರು ಪಟ್ಟಣದಲ್ಲಿನ ಪರಿಸ್ಥಿತಿ ಉದ್ವಿಗತೆಯಿಂದ ಕೂಡಿದೆಯಾದರೂ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಕಿಶ್ತ್ವಾರ್  ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆಯಾದರೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ರಾಣಾ ತಿಳಿಸಿದರು. ಈ ವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next