Advertisement

ಹಿಮಪಾತದಲ್ಲಿ ಸಿಲುಕಿದ ಏಳು ಮಂದಿ ಭಾರತೀಯ ಯೋಧರು

09:42 PM Feb 07, 2022 | Team Udayavani |

ನವದೆಹಲಿ: ಅರುಣಾಚಲ ಪ್ರದೇಶದ ಹಿಮಚ್ಛಾದಿತ ಪ್ರದೇಶವಾದ ಕೆಮರ್‌ ಸೆಕ್ಟರ್‌ನಲ್ಲಿ ಸೋಮವಾರ ಹಿಮಪಾತ ಸಂಭವಿಸಿದ್ದು, ಅದರಲ್ಲಿ ಏಳು ಮಂದಿ ಭಾರತೀಯ ಯೋಧರು ಸಿಲುಕಿಕೊಂಡಿದ್ದಾರೆ.

Advertisement

ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಸೋಮವಾರ ರಾತ್ರಿಯಾದರೂ ಹಿಮದೊಳಗೆ ಹುದುಗಿಹೋಗಿರುವ ಯೋಧರು ಪತ್ತೆಯಾಗಿರಲಿಲ್ಲ.

ಅತಿ ಎತ್ತರದ ಕೆಮಂಗ್‌ ಸೆಕ್ಟರ್‌ನಲ್ಲಿ ಪಹರೆಯಲ್ಲಿ ನಿರತರಾಗಿದ್ದ ಯೋಧರ ತಂಡ, ಹಿಮಪಾತಕ್ಕೆ ಸಿಲುಕಿದೆ. ಹಲವಾರು ಅಡಿಗಳಷ್ಟು ಆಳದಲ್ಲಿ ಯೋಧರು ಸಿಲುಕಿರಬಹುದಾಗಿದ್ದು ಅವರನ್ನು ಹೊರತೆಗೆಯುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇಂಥ ಕಾರ್ಯಾಚರಣೆಯಲ್ಲಿ ಈ ಹಿಂದೆ ಪಾಲ್ಗೊಂಡಿದ್ದ ಅನುಭವಿರುವ ನಿಷ್ಣಾತರನ್ನೂ ಕರೆಯಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಕೆಮರ್‌ ಸೆಕ್ಟರ್‌ನಲ್ಲಿ ಪ್ರತಿಕೂಲ ಹವಾಮಾನವಿತ್ತು. ಅದರ ನಡುವೆಯೇ ಸೈನಿಕರು ತಮ್ಮ ನಿತ್ಯದ ಕರ್ತವ್ಯ ನಿಭಾಯಿಸುತ್ತಿದ್ದರು. ಅದರ ನಡುವೆಯೇ ಈ ಅವಘಡ ಸಂಭವಿಸಿದೆ ಎಂದು ಸೇನೆ ಹೇಳಿ ದೆ.

Advertisement

Udayavani is now on Telegram. Click here to join our channel and stay updated with the latest news.

Next