Advertisement

ಸೇನಾ ಶಿಬಿರದಲ್ಲಿ ಶೂಟೌಟ್ ಬೆಂಗಳೂರಿನ ಯೋಧ‌ ಸಾವು

09:58 AM Jan 15, 2020 | Team Udayavani |

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದ ಸೇನಾ ಶಿಬಿರದಲ್ಲಿ ಸಿಐಎಸ್‌ಎಫ್ ಯೋಧರೊಬ್ಬರು ತಮ್ಮ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಪರಿಣಾಮ ಇಬ್ಬರು ಯೋಧರು ಮೃತಪಟ್ಟು, ಮತ್ತೂಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಘಟನೆಯಲ್ಲಿ ಮೃತಪಟ್ಟ ಯೋಧ ಬಿ.ಎನ್‌. ಮೂರ್ತಿ ಬೆಂಗಳೂರಿನವರು ಎಂದು ಮೂಲಗಳು ತಿಳಿಸಿವೆ. ಮತ್ತೂಬ್ಬ ಯೋಧನನ್ನು ಮೊಹಮ್ಮದ್‌ ತಸ್ಲೀಮ್‌ ಎಂದು ಗುರುತಿಸಲಾಗಿದೆ. ಯೋಧರ ಮಧ್ಯೆ ಚರ್ಚೆ ನಡೆಯುತ್ತಿದ್ದ ವೇಳೆ ತಾಳ್ಮೆ ಕಳೆದುಕೊಂಡ ಯೋಧ ಈ ಕೃತ್ಯವೆಸಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next