Advertisement

ಎಲ್‌ಓಸಿ ದಾಟಿ ಬರಲು ಯತ್ನಿಸಿದ ಮೂವರು ಪಾಕ್‌ ಉಗ್ರರ ಹತ್ಯೆ

11:17 AM Jun 06, 2018 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರದ ಮಾಚಿಲ್‌ ವಲಯದಲ್ಲಿಂದು ನಸುಕಿನ ವೇಳೆ ಪಾಕಿಸ್ಥಾನದಿಂದ ಭಾರತದ ಗಡಿ ನುಸುಳಿ ಒಳಬರಲು ಯತ್ನಿಸಿದ ಕನಿಷ್ಠ ಮೂವರು ಉಗ್ರರನ್ನು ಭಾರತೀಯ ಸೈನಿಕರು ಹೊಡೆದರುಳಿಸಿದ್ದಾರೆ. 

Advertisement

ಪಾಕ್‌ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫ‌ಲಗೊಳಿಸಿ ಮೂವರು ಉಗ್ರರನ್ನು ಹತ್ಯೆ ಗೈದ ಬಳಿಕ ಭಾರತೀಯ ಸೈನಿಕರು ಇಡಿಯ ಮಾಚಿಲ್‌ ಪ್ರದೇಶವನ್ನು ಸುತ್ತುವರಿದಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ. 

ಮಾಚಿಲ್‌ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಕಡೆಯಿಂದ ಶಂಕಾಸ್ಪದ ಚಲನವಲನ ಗೋಚರವಾದುದನ್ನು ಅನುಸರಿಸಿ ಭಾರತೀಯ ಯೋಧರು ಕಾರ್ಯಾಚರಣೆ ಆರಂಭಿಸಿದರು. 

ಆಗ ಪಾಕ್‌ ಉಗ್ರರು ಗುಂಡಿನ ಕಾಳಗಕ್ಕೆ ಮುಂದಾದರು. ಭಾರತೀಯ ಸೈನಿಕರು ಉಗ್ರರಿಗೆ ಗುಂಡಿನ ಮರು ಉತ್ತರ ನೀಡಿ ಮೂವರು ಉಗ್ರರನ್ನು ಹೊಡೆದುರುಳಿಸಿದರು ಎಂದು ಸೇನಾ ವಕ್ತಾರ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next