Advertisement

ಸಸ್ಯಕಾಶಿಯಲ್ಲಿ ಅರಳಿನಿಂತ ಸೇನಾಶೌರ್ಯ

03:20 PM Aug 05, 2018 | Team Udayavani |

ಬೆಂಗಳೂರು: ಲಾಲ್‌ಬಾಗ್‌ನ ಸಸ್ಯಕಾಶಿಯಲ್ಲಿ ನವ್ಯಲೋಕವೊಂದು ಮೇಳೈಸಿದೆ. ಗಾಜಿನ ಮನೆ ಆವರಣದಲ್ಲಿ ಬಣ್ಣ ಬಣ್ಣದ ಹೂವುಗಳಿಂದ ಭಾರತೀಯ ಸೇನೆ ಅನಾವರಣಗೊಂಡಿದೆ. ಸಿಯಾಚಿನ್‌, ಅಮರ್‌ ಜವಾನ್‌ ಜ್ಯೋತಿ, ಸೇನೆ ಶೌರ್ಯ, ಮಹಾನ್‌ ದಂಡ ನಾಯಕರ ಸಾಧನೆಯನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಡಲಾಗಿದೆ.

Advertisement

ತೋಟಗಾರಿಕೆ ಇಲಾಖೆ, ಸ್ವಾತಂತ್ರೊéàತ್ಸವದ ಹಿನ್ನೆಲೆಯಲ್ಲಿ “ಫ‌ಲಪುಷ್ಪ ಪ್ರದರ್ಶನ’-2018 ಏರ್ಪಡಿಸಿದ್ದು, ಯುದ್ಧ ಕ್ಷಿಪಣಿಗಳು, ಸೇನಾ ಸಾಧಕರಿಗೆ ನೀಡುವ ಶೌರ್ಯ ಪ್ರಶಸ್ತಿ ವಿವಿಧ ವಿಚಾರಗಳು ಚಿತ್ತಾಕರ್ಷಕ ಡೆಂಡೋಬ್ರಿಯಂ, ಮೊಖಾರ ಆರ್ಕಿಡ್‌, ಆಂಥೋರಿಯಂ, ಗುಲಾಬಿ, ಲಿಲ್ಲಿ, ಲಿಲಿಯಂ ಪುಷ್ಪಗಳು ತಿಳಿಸಿಕೊಡುತ್ತಿವೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 1947 ಕಾಶ್ಮೀರ ಕಾರ್ಯಾಚರಣೆಯಿಂದ 1999ರ ಕಾರ್ಗಿಲ್‌ ಯುದ್ಧದ ವರೆಗೆ ಪ್ರಮುಖ ಯುದ್ಧಗಳ ಭಾರತೀಯ ಸೈನ್ಯದ ಸಾಮರ್ಥ್ಯದ ಪರಿಚಯವಾಗಲಿದೆ. ಸೇನೆ ನೀಡುವ ವಿವಿಧ ಶೌರ್ಯ ಪ್ರಶಸ್ತಿ ಬಗ್ಗೆ ಸಂಪೂರ್ಣ ಮಾಹಿತಿ, ಫ‌ಲಕಗಳಲ್ಲಿ ವಿವರವೂ ಸಿಗಲಿದೆ. ಇಂತಹ ಅಪರೂಪದ ಫ‌ಲಪುಷ್ಪ ಪ್ರದರ್ಶನಕ್ಕೆ ಶನಿವಾರ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರ ಸ್ವಾಮಿ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆಯ ಈ ಪ್ರಯತ್ನ ಶ್ಲಾಘನೀಯ. ಸಿಯಾಚಿನ್‌ ಪ್ರದೇಶ ಸೇರಿದಂತೆ ರಕ್ಷಣಾ ಪಡೆಯ ನೈಜಚಿತ್ರಣ ಸಸ್ಯಕಾಶಿಯಲ್ಲಿ ಕಟ್ಟಿಕೊಡಲಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಸ್ಯಕಾಶಿಯಲ್ಲಿ ಅರಳಿ ನಿಂತಿರುವ ಅಪರೂಪವನ್ನು ಕಣ್ತುಂಬಿಕೊಳ್ಳಬೇಕು ಎಂದರು.

ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಮೇಯರ್‌ ಸಂಪತ್‌ ರಾಜ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರಣ, ತೋಟಗಾರಿಕೆ ಇಲಾಖೆಯ ನಿರ್ದೇಶಕ ವೈ.ಎಸ್‌.ಪಾಟೀಲ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

1ಲಕ್ಷ 20 ಸಾವಿರ ಹೂ ಬಳಕೆ: ಸೇನಾ ಮಾದರಿ ನಿರ್ಮಾಣ ಮಾಡುವುದಕ್ಕೆ ಸುಮಾರು 1ಲಕ್ಷದ 20 ಸಾವಿರಕ್ಕೂ ಅಧಿಕ ಹೂವುಗಳನ್ನು ಬಳಕೆ ಮಾಡಲಾಗಿದೆ. 15 ಮಂದಿ ನುರಿತ ಹೂ-ಜೋಡಣೆಕಾರರು ಹೂಗಳ ಜೋಡಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಒಂದು ಬಾರಿಗೆ 40 ಸಾವಿರ ಹೂಗಳಂತೆ ಒಟ್ಟು 3ಬಾರಿ ಹೂಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, ಸ್ನೇಹಾ ಪ್ರೋರಿಸ್ಟ್‌ನ ಟಿ.ಎಸ್‌. ಜಗದೀಶ್‌ ಅವರು ಪುಷ್ಪ ಜೋಡಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

20 ರೂಪಾಯಿಗೆ “ಕಾದಂಬರಿ’: ಸ್ವಾತಂತ್ರೊತ್ಸವದ ಹಿನ್ನೆಲೆಯಲ್ಲಿ ಬಿ.ಎಸ್‌.ಗೌಡ ಬುಕ್‌ ಸ್ಟಾಲ್‌ ಅ.ನ.ಕೃ, ತ.ರಾ.ಸು, ಎಂ.ಕೆ.ಇಂದಿರಾ, ಬೀಚಿ ಸೇರಿದಂತೆ ಖ್ಯಾತ ಕಾದಂಬರಿಕಾರರ ಪುಸ್ತಕಗಳನ್ನು 20 ರೂ.ಗಳಿಗೆ ನೀಡುತ್ತಿದೆ. 

ವಿದೇಶಿಯರ ಕಲರವ: “ಫ‌ಲಪುಷ್ಪ ಪ್ರದರ್ಶನ’ ಆರಂಭದ ದಿನವೆ ಜಪಾನ್‌ನ ಆ್ಯಂಡಿ, ಹೆಲೆನಾ, ಮಲಾನಿ ನೇತೃತ್ವದ ಸ್ನೇಹಿತರ ತಂಡ ಆಗಮಿಸಿತ್ತು. ಈ ವೇಳೆ ಪ್ರತ್ರಿಕಿಯಿಸಿದ ಆ್ಯಂಡಿ, ಭಾರತೀಯ ಸೇನೆಯ ಯಶೋಗಾಥೆಯನ್ನು ಹೂವಿನಲ್ಲಿ ಕಟ್ಟಿಕೊಟ್ಟಿರುವ ತೋಟಗಾರಿಕಾ ಇಲಾಖೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತ ನನಗೆ ಅಚ್ಚುಮೆಚ್ಚಿನ ತಾಣವಾಗಿದೆ ಎಂದರು.

ಸೇನೆಯ ಬಗ್ಗೆ ಇಷ್ಟು, ತಿಳುವಳಿಕೆ ಇರಲಿಲ್ಲ. ಆದರೆ ಇಲ್ಲಿಗೆ ಬಂದು ಫ‌ಲಪುಷ್ಪ ವೀಕ್ಷಿಸಿದೆ ಸೇನೆಯ ಬಗ್ಗೆ ಮತ್ತಷ್ಟು ಗೌರವ ಭಾವನೆ ಮೂಡಿತು.
-ವೈಭವ್‌, ವಿದ್ಯಾರ್ಥಿ ನಂದಿನಿ ಲೇಔಟ್‌.

ದೇಶದ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಹಲವು ರೀತಿಯ ಅನುಭವ ಕಂಡಿದ್ದೇನೆ. ಲಾಲ್‌ಬಾಗ್‌ನಲ್ಲಿ ಸೇನೆಯ ಬಗ್ಗೆ ಫ‌ಲಪುಷ್ಪ ಪ್ರದರ್ಶನ ಹಮ್ಮಿಕೊಂಡಿರುವುದು ನನಗೆ ಅತೀವ ಖುಷಿ ಕೊಟ್ಟಿದೆ.
-ಬಸ್ಸಿಲಾಲ್‌, ಸೇನಾಯೋಧ ಅಗರ್ತಲ.

Advertisement

Udayavani is now on Telegram. Click here to join our channel and stay updated with the latest news.

Next