Advertisement

ವ್ಯಾಪಾರಿಯ ಅಡ್ಡಗಟ್ಟಿ 50,000 ಲೂಟಿ ಮಾಡಿದ ಶಸ್ತ್ರಧಾರಿಗಳು

12:01 PM Apr 13, 2018 | udayavani editorial |

ಮುಜಫ‌ರನಗರ : ಸಶಸ್ತ್ರ ದುಷ್ಕರ್ಮಿಗಳು ಶಾಮ್ಲಿ ಜಿಲ್ಲೆಯ ಬ್ಯಾಂಕ್‌ ಒಂದರ ಸಮೀಪ ವ್ಯಾಪಾರಿ ಒಬ್ಬರನ್ನು ಅಡ್ಡಗಟ್ಟಿ ಅವರಿಂದ 50,000 ರೂ. ಲೂಟಿ ಮಾಡಿದ ಘಟನೆ ನಡೆದಿದೆ.

Advertisement

ಕೈರಾನಾದಲ್ಲಿನ ಬ್ಯಾಂಕ್‌ ಶಾಖೆಯಲ್ಲಿ  ಹಣ ವಿತ್‌ಡ್ರಾ ಮಾಡಿಕೊಂಡು ವ್ಯಾಪಾರಿ ಆರ್‌ ಪಿ ಮಿತ್ತಲ್‌ ಅವರು ಹೊರ ಬರುವುದನ್ನೇ ಕಾಯುತ್ತಿದ್ದ ಶಸ್ತ್ರಧಾರಿ ದುಷ್ಕರ್ಮಿಗಳು ಅವರನ್ನು ತಡೆಗಟ್ಟಿ 50,000 ರೂ. ಲೂಟಿ ಮಾಡಿದರು ಎಂದು ಎಸ್‌ಎಚ್‌ಓ ಸುನೀಲ್‌ ದತ್‌ ತಿಳಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡು ಶಸ್ತ್ರಧಾರಿ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next