Advertisement

ಅರ್ಜುನನ ಬಾಣದಲ್ಲಿ ಪರಮಾಣು ಶಕ್ತಿ ಇತ್ತು

10:04 AM Jan 17, 2020 | Hari Prasad |

ಕೋಲ್ಕತಾ: ಅರ್ಜುನನ ಬಾಣದಲ್ಲಿ ಅಣು ಶಕ್ತಿಯ ಅಂಶಗಳು ಇದ್ದವು ಎಂದು ಪಶ್ಚಿಮ ಬಂಗಾಲ ರಾಜ್ಯಪಾಲ ಜಗದೀಪ್‌ ಧನ್ಕರ್‌ ಹೇಳಿದ್ದಾರೆ. ಕೋಲ್ಕತಾದಲ್ಲಿ ಆಯೋಜಿಸಲಾಗಿದ್ದ ಪೂರ್ವ ಭಾರತ ವಿಜ್ಞಾನ ಉತ್ಸವ ಮತ್ತು 19ನೇ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

Advertisement

‘ರಾಮಾಯಣದ ಅವಧಿಯಲ್ಲಿ ಕೂಡ ಹಾರುವ ವಸ್ತುಗಳು ಇದ್ದವು. 1910 ಅಥವಾ 1911ರಲ್ಲಿ ವಿಮಾನ ಕಂಡು ಹಿಡಿಯಲಾಯಿತು ಎಂದು ಆಧುನಿಕ ಸಂಶೋಧನೆಗಳು ಹೇಳುತ್ತವೆ. ಆದರೆ ನಮ್ಮ ಮಹಾಕಾವ್ಯಗಳನ್ನು ಗಮನಿಸಿದಾಗ ವಿಮಾನಗಳು ಆ ಕಾಲದಲ್ಲಿಯೇ ಇದ್ದವು. ಮಹಾಭಾರತ ಯುದ್ಧವನ್ನು ಸಂಜಯ ಧೃತರಾಷ್ಟ್ರನಿಗೆ ಯುದ್ಧ ಭೂಮಿಯಲ್ಲಿ ಇಲ್ಲದೆಯೇ ಅಲ್ಲಿ ನಡೆಯುತ್ತಿರುವ ಸಂಗ್ರಾಮದ ವಿವರಗಳನ್ನು ತಿಳಿಸುತ್ತಿದ್ದ ಉದಾರಹಣೆಗಳು ಇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next