Advertisement

ಅರ್ಜುನ ಪ್ರಶಸ್ತಿ ಹಾದಿ ಸುಗಮ: ಸಂಜಿತಾ ಚಾನು

03:21 AM Jun 12, 2020 | Sriram |

ಹೊಸದಿಲ್ಲಿ: ಡೋಪಿಂಗ್‌ ಪ್ರಕರಣದಿಂದ ಮುಕ್ತಗೊಂಡ ಕಾರಣ ತನ್ನ ಅರ್ಜುನ ಪ್ರಶಸ್ತಿಯ ಹಾದಿ ಸುಗಮಗೊಂಡಿದೆ ಎಂಬುದಾಗಿ ವೇಟ್‌ಲಿಫ್ಟರ್‌ ಸಂಜಿತಾ ಚಾನು ಹೇಳಿದ್ದಾರೆ.

Advertisement

2016ರಿಂದಲೂ ಈ ಪ್ರತಿಷ್ಠಿತ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ತನಗೆ ಈ ಬಾರಿ ಒಲಿದೀತು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ವಾಡಾ ಸೂಚನೆಯಂತೆ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಶನ್‌ (ಐಡಬ್ಲ್ಯುಎಫ್) ಸಂಜಿತಾ ಚಾನು ಅವರನ್ನು ಆರೋಪ ಮುಕ್ತಗೊಳಿಸಿತ್ತು.

“2016ರಲ್ಲಿ ನಾನು ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ಅಂದು ಸಿಕ್ಕಿರಲಿಲ್ಲ. 2017ರಲ್ಲೂ ಕಡೆಗಣಿಸಲಾಯಿತು. ಬಳಿಕ ಡೋಪಿಂಗ್‌ ಹಗರಣದಲ್ಲಿ ಸಿಲುಕಿದ ಕಾರಣ ದೂರ ಉಳಿಯಬೇಕಾಯಿತು. ಈಗ ಕಾಲ ಕೂಡಿಬಂದಿದೆ’ ಎಂದಿದ್ದಾರೆ 26ರ ಹರೆಯದ ಸಂಜಿತಾ ಚಾನು.

 

Advertisement

Udayavani is now on Telegram. Click here to join our channel and stay updated with the latest news.

Next