Advertisement

ಮುಂಬೈ ಅ-23 ತಂಡಕ್ಕೆ ಅರ್ಜುನ್‌

02:11 AM Feb 11, 2019 | |

ಮುಂಬೈ: ಬಿಸಿಸಿಐ ಏಕದಿನ ಲೀಗ್‌ ಕ್ರಿಕೆಟ್ ಪಂದ್ಯಾವಳಿಗಾಗಿ ಆರಿಸಲಾದ ಮುಂಬೈ 23 ವಯೋಮಿತಿ ತಂಡದಲ್ಲಿ ಅರ್ಜುನ್‌ ತೆಂಡುಲ್ಕರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಪಂದ್ಯಾವಳಿ ಫೆ.14ರಿಂದ ಜೈಪುರದಲ್ಲಿ ಆರಂಭವಾಗಲಿದೆ.

Advertisement

ಡಿ.ವೈ. ಪಾಟೀಲ್‌ ಟಿ20 ಟೂರ್ನಿ ಮತ್ತು ಆರ್‌ಎಫ್ಎಸ್‌ ತಲ್ಯಾರ್‌ ಖಾನ್‌ ಸ್ಮಾರಕ ಆಹ್ವಾನಿತ ಕ್ರಿಕೆಟ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಅರ್ಜುನ್‌ ಆಯ್ಕೆಯನ್ನು ಸುಗಮಗೊಳಿಸಿತು. ತಲ್ಯಾರ್‌ ಖಾನ್‌ ಟೂರ್ನಿಯ ಪಂದ್ಯವೊಂದರ 18ನೇ ಹಾಗೂ 20ನೇ ಓವರಿನಲ್ಲಿ ಕೇವಲ 5 ರನ್‌ ನೀಡಿ, ಯಶಸ್ವಿ ಬ್ಯಾಟ್ಸ್‌ಮನ್‌ ಜೈಸ್ವಾಲ್‌ ವಿಕೆಟ್ ಹಾರಿಸಿದ ಸಾಧನೆ ಅರ್ಜುನ್‌ ಅವರದಾಗಿದೆ ಎಂಬುದನ್ನು ಅ-23 ಕೋಚ್ ಅಮಿತ್‌ ಪಗ್ನಿಸ್‌ ನೆನಪಿಸಿಕೊಂಡಿದ್ದಾರೆ.

ಮುಂಬಯಿ ಅಂಡರ್‌-23 ತಂಡ: ಜಾಯ್‌ ಬಿಷ್ಟಾ (ನಾಯಕ), ಹಾರ್ದಿಕ್‌ ತಮೋರೆ, ಸುವೇದ್‌ ಪಾರ್ಕರ್‌, ಚಿನ್ಮಯ್‌ ಸುತಾರ್‌, ಸಿದ್ಧಾರ್ಥ್ ಅಕ್ರೆ, ಕರ್ಶ್‌ ಕೊಠಾರಿ, ತನುಷ್‌ ಕೋಟ್ಯಾನ್‌, ಆಕಿಬ್‌ ಕುರೇಶಿ, ಅಂಜ್‌ದೀಪ್‌ ಲಾಡ್‌, ಕೃತಿಕ್‌ ಹನಗವಾಡಿ, ಆಕಾಶ್‌ ಆನಂದ್‌, ಅಮಾನ್‌ ಖಾನ್‌, ಅಥರ್ವ ಅಂಕೋಲೆಕರ್‌, ಅರ್ಜುನ್‌ ತೆಂಡುಲ್ಕರ್‌, ಸಾಯಿರಾಜ್‌ ಪಾಟೀಲ್‌.

Advertisement

Udayavani is now on Telegram. Click here to join our channel and stay updated with the latest news.

Next