Advertisement

Arjun Kapikad; ಕರಾವಳಿ ಕರ್ನಾಟಕದ ಕಥೆ ʼಕಲ್ಜಿಗʼ

05:30 PM Aug 24, 2024 | Team Udayavani |

ತುಳು ಹಾಗೂ ಕನ್ನಡದಲ್ಲಿ ತಯಾರಾಗಿರುವ “ಕಲ್ಜಿಗ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್‌, ಮಾಜಿ ಸಚಿವ ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್‌ ರೈ, ತುಳು ಚಿತ್ರರಂಗದ ಹಿರಿಯ ನಟ ದೇವದಾಸ್‌ ಕಾಪಿಕಾಡ್‌, ರಂಗಕರ್ಮಿ ವಿಜಯಕುಮಾರ್‌ ಕೊಡಿಯಾಲ್‌ ಬೈಲ್‌ ಹಾಗೂ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿತ್ತು.

Advertisement

ಸುಮನ್‌ ಸುವರ್ಣ ಈ ಚಿತ್ರದ ನಿರ್ದೇಶಕರು. ಹಿಮಾನಿ ಫಿಲಂಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕಡಲ ಕಿನಾರೆಯಲ್ಲಿ ಘಟಿಸುವ ಬೆರಗಿನ ಕಥೆ ಮತ್ತು ಆ ಭಾಗದ ಕಲಾವಿದರೇ ತುಂಬಿರುವ ಈ ಚಿತ್ರವಿದು.

ಈ ಚಿತ್ರ ಸೆಪ್ಟೆಂಬರ್‌ 13 ರಂದು ಬಿಡುಗಡೆ ಗೊಳ್ಳಲಿದೆ. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿ, ಉತ್ತರ ಕರ್ನಾಟಕ ಮುಂತಾದೆಡೆ ಕಲ್ಜಿಗ ಬಿಡುಗಡೆಗೊಳ್ಳಲಿದೆ. ಮುಂಬಯಿ, ಗಲ್ಫ್ ರಾಷ್ಟ್ರಗಳಲ್ಲಿಯೂ ಕಲ್ಜಿಗ ತೆರೆಕಾಣಲಿದೆ.

ಅರ್ಜುನ್‌ ಕಾಪಿಕಾಡ್‌ ಈ ಚಿತ್ರದ ನಾಯಕ. ಸುಶ್ಮಿತಾ ಭಟ್‌ ನಾಯಕಿ. ಶರತ್‌ ಕುಮಾರ್‌ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಂಸಲೇಖ ಸಂಗೀತ, ಸಾಹಿತ್ಯ, ಸಚಿನ್‌ ಶೆಟ್ಟಿ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next