Advertisement

Udupi; ವಿದ್ಯಾರ್ಥಿಗಳ ನಡುವೆ ಗಲಾಟೆ, ಚೂರಿ ಇರಿತ

12:44 AM Jan 31, 2024 | Team Udayavani |

ಉಡುಪಿ: ಬ್ರಹ್ಮಾವರದ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿಗಳಿಂದ ಬೈಕ್‌ ವಿಚಾರಕ್ಕೆ ನಡೆದ ಜಗಳ ಉಲ್ಬಣಿಸಿ ಕೊಲೆಯತ್ನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ. ಪ್ರತೀಕ್‌, ಸುಹಾಸ್‌ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಸೆಕೆಂಡ್‌ಹ್ಯಾಂಡ್‌ ಬೈಕ್‌ ಖರೀದಿ ಮಾಡಿರುವುದನ್ನು ಕಂಡ ಆರೋಪಿ ಸುಹಾಸ್‌ ಇದು ಕದ್ದ ಬೈಕ್‌ ಎಂದು ಆರೋಪಿಸಿದ್ದಾನೆ.

Advertisement

ಜ. 28ರಂದು ಸುಹಾಸ್‌ಗೆ ಪ್ರತೀಕ್‌ ಕರೆ ಮಾಡಿದ್ದು, ಈ ವೇಳೆ ಸುಹಾಸ್‌ ಜತೆಗಿದ್ದ ತರುಣ್‌ ಬೈದಿದ್ದಾನೆ. ಜ. 29ರಂದು ಪ್ರತೀಕ್‌ ಸುಹಾಸ್‌ಗೆ ಎಂಜಿಎಂ ಮೈದಾನದ ಹತ್ತಿರ ಬರಲು ತಿಳಿಸಿದ್ದು, ಈ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಿದ್ದಾರೆ. ಆರೋಪಿ ತರುಣ್‌ ಪ್ರತೀಕ್‌ಗೆ ಚಾಕುವಿನಿಂದ ಹೊಟ್ಟೆ, ತೊಡೆಗೆ ಇರಿದು ಗಾಯಗೊಳಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next