Advertisement

ಅಡಿಕೆ: ಅಫಿದವಿತ್‌ ವಾಪಸ್‌ಗೆ ಯತ್ನ; ನಳಿನ್‌

12:47 PM Feb 19, 2018 | |

ಮಂಗಳೂರು: ಅಡಿಕೆ ಆರೋಗ್ಯಕ್ಕೆ ಹಾನಿಕರವೇ ಅಲ್ಲವೇ ಎಂಬ ವಿಚಾರವಾಗಿ ಪ್ರಸ್ತುತ ಭಾರೀ ಚರ್ಚೆಯಾಗುತ್ತಿದ್ದು, ಈ ಬಗ್ಗೆ ದೇಶದಲ್ಲಿ ಈ ಹಿಂದೆ ಇದ್ದ ಯುಪಿಎ ಸರಕಾರ ಅಫಿದವಿತ್‌ ಸಲ್ಲಿಸಿತ್ತು. ಅದು ಈಗ ನ್ಯಾಯಾಲಯದ ಮುಂದೆ ಇದೆ. ಆ ಅಫಿದವಿತ್‌ ಹಿಂಪಡೆಯುವ ಕುರಿತು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲಿ ಮೂರು ಸಭೆಗಳು ನಡೆದಿವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ. 

Advertisement

ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎನ್ನುವುದನ್ನು ಲ್ಯಾಬ್‌ ಪರೀಕ್ಷೆಯ ಮೂಲಕ ದೃಢೀಕರಿಸಿ ಪ್ರಮಾಣಪತ್ರ ಪಡೆಯಬೇಕಾಗಿದೆ. ಆದರೆ ಈ ವಿಚಾರದಲ್ಲಿ ಕೃಷಿ, ಆರೋಗ್ಯ ಮತ್ತು ಕಾನೂನು ಇಲಾಖೆಗಳಿಂದ ನಿರಾಕ್ಷೇಪಣೆ ಸಿಗಬೇಕಾಗಿದೆ. ಮೂರು ಇಲಾಖೆಗಳ ವ್ಯಾಪ್ತಿ ಇರುವುದರಿಂದ ವಿಷಯ ಜಟಿಲವಾಗಿದೆ. ನ್ಯಾಯಾ ಲಯದ ಮುಂದಿರುವುದರಿಂದ ಕಾನೂನುಬದ್ಧವಾಗಿಯೇ ಮುಂದು ವರಿಯ ಬೇಕಿದೆ. ಏನಿದ್ದರೂ ಅಫಿದವಿತನ್ನು ಹಿಂಪಡೆದು ಅಡಿಕೆ ಆರೋಗ್ಯಕ್ಕೆ ಹಾನಿ ಕರ ವಲ್ಲ ಎಂಬ ಪ್ರಮಾಣ ಪತ್ರವನ್ನು ಪಡೆಯಲು ಸರ್ವ ಪ್ರಯತ್ನ ನಡೆಸ ಲಾಗುವುದು ಎಂದವರು ರವಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next