Advertisement

ಸಣ್ಣ ನೀರಾವರಿ ಸಿಕ್ಕಿದ್ದಕ್ಕೆ ಪುಟ್ಟರಾಜು ಅತೃಪ್ತಿ?

07:00 AM Jun 09, 2018 | Team Udayavani |

ಬೆಂಗಳೂರು: ಮಹತ್ವದ ಖಾತೆ ನಿರೀಕ್ಷೆಯಲ್ಲಿದ್ದ ಜೆಡಿಎಸ್‌ನ ಸಿ.ಎಸ್‌.ಪುಟ್ಟರಾಜು ತಮಗೆ ಸಣ್ಣ ನೀರಾವರಿ
ಖಾತೆ ಸಿಕ್ಕಿರುವ ಬಗ್ಗೆ ಅಸಮಾಧಾನಗೊಂಡಿದ್ದು, ಇದನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Advertisement

ಶುಕ್ರವಾರ ಸಚಿವರ ಖಾತೆಗಳನ್ನು ಪ್ರಕಟಿಸಲಾಗಿದ್ದು, ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಸಿಕ್ಕಿತ್ತು. ಸಾರಿಗೆ
ಅಥವಾ ಇನ್ಯಾವುದಾದರೂ ಪ್ರಮುಖ ಖಾತೆಯ ನಿರೀಕ್ಷೆಯಲ್ಲಿದ್ದ ಪುಟ್ಟರಾಜು ಇದರಿಂದ ಅಸಮಾಧಾನಗೊಂ
ಡಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ಶಾಸಕ ಮಾತ್ರವಲ್ಲದೆ ಸಂಸದನೂ ಆಗಿದ್ದ ನನಗೆ ಸಣ್ಣ ಖಾತೆ ನೀಡಲಾಗಿದೆ.

ಆದರೆ, ರಾಜಕೀಯವಾಗಿ ಮತ್ತು ಅನುಭವದಲ್ಲಿ ತಮಗಿಂತ ಕಿರಿಯರಿಗೆ ಪ್ರಮುಖ ಖಾತೆಗಳನ್ನು ನೀಡಿದ್ದಾರೆ.
ಖಾತೆ ನೀಡದಿದ್ದರೂ ಪರವಾಗಿರಲಿಲ್ಲ, ಈ ರೀತಿ ಸಣ್ಣ ಖಾತೆ ನೀಡಿದ್ದು ಸರಿಯಲ್ಲ ಎಂದು ಪುಟ್ಟರಾಜು ಆಪ್ತರ ಬಳಿ
ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next