Advertisement

ನೋಟಿಂದ ಬರುತ್ತಾ ಕಾಯಿಲೆ?

12:57 PM Sep 03, 2018 | |

ನವದೆಹಲಿ: ನೋಟುಗಳಿಂದ ಮಾರಣಾಂತಿಕ ಕಾಯಿಲೆಗಳು ಹರಡುತ್ತಿವೆಯೇ ಎಂದು ತನಿಖೆ ನಡೆಸಬೇಕು ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿಗೆ ವ್ಯಾಪಾರಿಗಳ ಮಂಡಳಿ ಸಿಎಐಟಿ ಸೂಚಿಸಿದೆ. ಮಾರಣಾಂತಿಕ ಕಾಯಿಲೆ ಹರಡ ದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಳ್ಳಬೇಕು ಎಂದೂ ಮಂಡಳಿ ಆಗ್ರಹಿಸಿದೆ.

Advertisement

ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ಅಧ್ಯಯನ ವರದಿಗಳನ್ನು ಸಿಎಐಟಿ ಉಲ್ಲೇಖೀಸಿದ್ದು, ಮೂತ್ರ ಹಾಗೂ ಶ್ವಾಸಕೋಶ ಸೋಂಕುಗಳು, ಚರ್ಮ ಸೋಂಕು ಗಳು ಹಾಗೂ ಇತರ ಸಾಂಕ್ರಾಮಿಕ ರೋಗಗಳನ್ನು ಹರಡುವ ಬಗ್ಗೆ ಈ ಹಿಂದೆ ವರದಿಯಾಗಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಸಚಿವಾಲಯ ತೆಗೆದು ಕೊಳ್ಳಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪ್ರತಿ ವರ್ಷ ಈ ರೀತಿಯ ವರದಿ ಗಳು ಪ್ರಕಟವಾಗುತ್ತಲೇ ಇದ್ದರೂ, ಈವರೆಗೂ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್ವಾಲ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next