Advertisement

ಅಭಿಷೇಕ್‌ ಸಿನಿಮಾಗೆ ಮತ್ತೆ ನಿರ್ದೇಶಕರು ಬದಲಾಗ್ತಾರಾ?

11:09 AM Mar 07, 2018 | |

ಅಂಬರೀಶ್‌ ಪುತ್ರ ನಾಯಕರಾಗುತ್ತಾರೆ, ಸದ್ಯದಲ್ಲೇ ಅವರ ಸಿನಿಮಾ ಆರಂಭವಾಗಲಿದೆ ಎಂಬ ಸುದ್ದಿ ಓಡಾಡುತ್ತಲೇ ಇದೆ. ಆರಂಭದಲ್ಲಿ ಈ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಾರೆಂದು ಹೇಳಲಾಗಿತ್ತಾದರೂ, ಆ ನಂತರ ಚೇತನ್‌ ಕುಮಾರ್‌ ಸಿನಿಮಾ ನಿರ್ದೇಶಿಸುತ್ತಾರೆಂದು ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರೇ ಹೇಳಿದ್ದರು. ಆದರೆ, ಈಗ ಮತ್ತೆ ಚಿತ್ರದ ಗೊಂದಲ ಮುಂದುವರಿದಂತೆ ಕಾಣುತ್ತದೆ. ಆರಂಭದಲ್ಲಿ ಚೇತನ್‌ ಅವರ ಕಥೆಯೇ ಅಂತಿಮವಾಗಿತ್ತು.

Advertisement

ಆದರೆ, ಈಗ ಕಥೆ ಬದಲಾಗಿದೆ. ಚಿತ್ರತಂಡ ಇನ್ನೂ ಕಥೆಯನ್ನು ಅಂತಿಮಗೊಳಿಸುವಲ್ಲಿ ಬಿಝಿಯಾಗಿದೆ. ಕಥೆ ಬದಲಾದ ಮೇಲೆ ನಿರ್ದೇಶಕ ಬದಲಾಗದೇ ಇರುತ್ತಾರಾ? ಈಗ ಅದೇ ಗೊಂದಲ ಮುಂದುವರಿದಿದೆ. ಸದ್ಯಕ್ಕೆ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆಂಬುದು ಇನ್ನೂ ಅಂತಿಮವಾಗಿಲ್ಲ. ಹಾಗಾಗಿ, ಚೇತನ್‌ ಈ ಚಿತ್ರವನ್ನು ನಿರ್ದೇಶಿಸುತ್ತಾರಾ ಅಥವಾ ಬೇರೆ ನಿರ್ದೇಶಕರ ಕೈಗೆ ಸಿನಿಮಾ ಹೋಗುತ್ತಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಎಲ್ಲವೂ ಅಂದುಕೊಂಡಂತೆ ಆದರೆ, ಅಭಿಷೇಕ್‌ ಚೊಚ್ಚಲ ಚಿತ್ರ “ಅಮರ್‌’ ಈ ತಿಂಗಳಾಂತ್ಯದಲ್ಲಿ ಆರಂಭವಾಗಬೇಕಿತ್ತು. ಕಥೆ ಹಾಗೂ ನಿರ್ದೇಶಕರು ಅಂತಿಮವಾಗದ ಕಾರಣ ಸಿನಿಮಾ ಮುಂದೆ ಹೋಗಿದೆ. ಕಥೆ ಮತ್ತು ನಿರ್ದೇಶಕರು ಆಯ್ಕೆಯಾದರೆ ಸಿನಿಮಾ ಮುಂದಿನ ತಿಂಗಳಾಂತ್ಯದಲ್ಲಿ ಆರಂಭವಾಗಬಹುದು. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡುವ ನಿರ್ಮಾಪಕ ಸಂದೇಶ್‌ ನಾಗರಾಜ್‌, “ಸದ್ಯಕ್ಕೆ ಕಥೆ ಅಂತಿಮವಾಗಿಲ್ಲ. ಒಂದಷ್ಟು ಕಥೆಗಳಿದ್ದು, ಯಾರ ಕಥೆ ಅಂತಿಮವಾಗುತ್ತದೋ ನೋಡಬೇಕು’ ಎನ್ನುತ್ತಾರೆ.

ಹಾಗಾದರೆ, ನಿರ್ದೇಶಕರು ಬದಲಾಗುತ್ತಾರಾ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೂ ಅವರು ಉತ್ತರಿಸುತ್ತಾರೆ. “ಯಾರ ಕಥೆ ಅಂತಿಮವಾಗುತ್ತದೋ ಅವರೇ ಆ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಸದ್ಯಕ್ಕೆ ಯಾರು ಅಂತಿಮವಾಗಿಲ್ಲ. ಮಾತುಕತೆಯಲ್ಲಿದೆ’ ಎನ್ನುತ್ತಾರೆ ಸಂದೇಶ್‌ ನಾಗರಾಜ್‌. ನಿರ್ದೇಶಕ ಚೇತನ್‌ ಕೂಡಾ ಇನ್ನೂ ಯಾವುದೂ ಅಂತಿಮವಾಗಿಲ್ಲ ಎನ್ನುತ್ತಾರೆ. “ಕಥೆ ಅಂತಿಮ ಮಾಡೋದು ನಿರ್ಮಾಪಕರಿಗೆ ಬಿಟ್ಟಿದ್ದು. ಅವರಿಗೆ ಯಾವುದು ಇಷ್ಟವಾಗುತ್ತದೋ ಅದನ್ನು ಮಾಡುತ್ತಾರೆ. ಇನ್ನೂ ಫೈನಲ್‌ ಆಗಿಲ್ಲ’ ಎನ್ನುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next