Advertisement

ಸರವಣ ಭವನ ಮಾಲೀಕ ನಿಧನ

12:36 AM Jul 19, 2019 | Team Udayavani |

ಚೆನ್ನೈ: ತಮಿಳುನಾಡಿನ ‘ಸರವಣ ಭವನ’ ರೆಸ್ಟೋರೆಂಟ್‌ಗಳ ಮಾಲೀಕ ಆರ್‌. ರಾಜಗೋಪಾಲ್, ಗುರುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ‘ಸೆಪ್ಟಿಕ್‌ ಶಾಕ್‌’ನಿಂದ ಮೃತರಾಗಿ ರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. 2001ರಲ್ಲಿ ‘ಸರವಣ ಭವನ’ದ ಉದ್ಯೋಗಿ ಯೊಬ್ಬರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ರಾಜಗೋಪಾಲ್ಗೆ, ಜು. 9ರಂದು ಆ್ಯಂಬುಲೆನ್ಸ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ಗೆ ಆಗಮಿಸಿ ಶರಣಾಗಿದ್ದರು. ಹೃದಯಾಘಾತವಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next