Advertisement

ಅರಾಟೆ ಸೇತುವೆ: ದುರಸ್ತಿ ಕಾಮಗಾರಿ ಆರಂಭ

08:25 PM Sep 30, 2020 | mahesh |

ಕುಂದಾಪುರ: ಬಿರುಕು ಬಿಟ್ಟಿರುವ ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆಯ ದುರಸ್ತಿ ಕಾಮಗಾರಿ ಬುಧವಾರದಿಂದ ಆರಂಭ ಗೊಂಡಿದೆ. ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿರುವ ಐಆರ್‌ಬಿ ಸಂಸ್ಥೆಯಿಂದ ಈಗ ದುರಸ್ತಿ ಕೆಲಸ ಶುರುವಾಗಿದೆ.

Advertisement

ಅರಾಟೆಯಲ್ಲಿ ಐಆರ್‌ಬಿ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಹೊಸ ಸೇತುವೆಯ ಮೇಲ್ಭಾಗದಲ್ಲಿ ಕಳೆದ ಸೆ. 26ರಂದು ಬಿರುಕು ಕಾಣಿಸಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪರಿಶೀಲನೆಗಾಗಿ ನೇಮಿಸಿದ ತಾಂತ್ರಿಕ ತಜ್ಞರ ಸಮಿತಿಯ ವರದಿಯಂತೆ ಅರಾಟೆ ಸೇತುವೆಯ ಮೇಲ್ಭಾಗದಲ್ಲಿ ವರದಿಯಂತೆ ಸೇತುವೆಯ ಮೂಲ ರಚನೆ ಯಲ್ಲಿ ಯಾವುದೇ ತೊಂದರೆಯಾಗಿಲ್ಲ. ಸೇತುವೆಯ ಮೇಲಾºಗದಲ್ಲಿ ಮಾತ್ರ ಬಿರುಕು ಉಂಟಾಗಿದ್ದು, ಸ್ಪಾನ್‌ ಜಾಯಿಂಟ್‌ನಲ್ಲಿ ಅಂತರ ಕಂಡು ಬಂದಿರುವುದರಿಂದ ಅಪಾಯವಿಲ್ಲ. ಹಾಗಾಗಿ ಸೇತುವೆಯ ಮೇಲ್ಭಾಗದಲ್ಲಿ ಹಾಕಲಾದ ಕಾಂಕ್ರೀಟ್‌ಗಳನ್ನು ಸಂಪೂರ್ಣ ತೆಗೆದು, ಮತ್ತೆ ಹೊಸದಾಗಿ ಅಲ್ಲಿಗೆ ಕಾಂಕ್ರೀಟೀಕರಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next