Advertisement

ವೀರಣ್ಣಗೆ ಆಯುಷ್ಯ ಮಂತ್ರಾಲಯ ಪ್ರಶಂಸೆ

12:28 PM Jul 27, 2020 | Suhan S |

ವಾಡಿ: ಕೋವಿಡ್‌-19 ಪರಿಣಾಮ ಘೋಷಿಸಲಾದ ಲಾಕ್‌ಡೌನ್‌ ದಿನಗಳಲ್ಲಿ “ಯೋಗ ಎಟ್‌ ಹೋಂ-ಯೋಗ ವಿಥ್‌ ಫ್ಯಾಮಿಲಿ’ ಎಂಬ ಕೇಂದ್ರ ಸರಕಾರದ ಘೋಷವ್ಯಾಕ್ಯದಡಿ ಸಾಮಾಜಿಕ ಜಾಲತಾಣಗಳ ಲೈವ್‌ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ನಿತ್ಯ ಮನೆಯಲ್ಲೇ ಯೋಗ ಹೇಳಿಕೊಟ್ಟ ಸ್ಥಳೀಯ ಪತಾಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರ ಸೇವೆಯನ್ನು ಗುರುತಿಸಿರುವ ಕೇಂದ್ರ ಆಯುಷ್ಯ ಮಂತ್ರಾಲಯವು ಅಂತಾರಾಷ್ಟ್ರೀಯ ಯೋಗ ಪ್ರಸಂಶೆ ಪ್ರಶಸ್ತಿ ನೀಡಿ ಅಭಿನಂದಿಸಿದೆ.

Advertisement

ಡಿಜಿಟಲ್‌ ಮೀಡಿಯಾದ ಮೂಲಕ ಸುಮಾರು ಜನ ಯೋಗಾಸಕ್ತರಿಗೆ ಜೂನ್‌ ತಿಂಗಳ ಮೊದಲ ದಿನದಿಂದ ಹಿಡಿದು ಜು.21ರ ಅಂತಾರಾಷ್ಟ್ರೀಯ ಯೋಗ ದಿನದ ವರೆಗೂ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಅದರ ಮಹತ್ವ ಸಾರಿದ್ದಾರೆ. ಪತಾಂಜಲಿ ನಡೆಸಿದ ಡಿಜಿಟಲ್‌ ವಿಡಿಯೋ ಲೈವ್‌ ಯೋಗಭ್ಯಾಸದ ನೇರ ಪ್ರಸಾರದಲ್ಲಿ ಪಾಲ್ಗೊಂಡು ನೂರಾರು ಜನ ವಾಯು ವಿಹಾರಿಗಳಿಗೆ ಯೋಗ ಹೇಳಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಕೇಂದ್ರದ ಆಯುಷ್ಯ ಮಂತ್ರಾಲಯ ಇಲಾಖೆ ನಗರದ ಪತಾಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರಿಗೆ ಅಂತಾರಾಷ್ಟ್ರೀಯ ಯೋಗ ಪ್ರಸಂಶೆ ಪ್ರಶಸ್ತಿ ನೀಡಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next