Advertisement

ಕ್ರೀಡಾ ತರಬೇತುದಾರರ ನೇಮಕ

09:46 AM Sep 27, 2017 | |

ಬೆಂಗಳೂರು: ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ 100 ಮಂದಿ ಕ್ರೀಡಾ ತರಬೇತುದಾರರ ನೇಮಕ ಮಾಡಿಕೊಳ್ಳಲಿ ದ್ದೇವೆ, ಜತೆಗೆ ಕ್ರೀಡಾ ತರಬೇತುದಾರರ ವೇತನವನ್ನು ಹೆಚ್ಚಳ ಮಾಡಿದ್ದೇವೆಂದು ಯುವ ಸಬಲೀಕರಣ, ಕ್ರೀಡೆ ಇಲಾಖೆ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಇಲಾಖಾ ವ್ಯಾಪ್ತಿಯಲ್ಲಿ 14 ಈಜುಕೊಳ ಇದ್ದು, ಇದರ ನಿರ್ವಹಣೆಯನ್ನು ಗುತ್ತಿಗೆಯ ವರಿಗೆ ನೀಡುವುದನ್ನು ರದ್ದು ಮಾಡಿದ್ದೇವೆ. ಇಲಾಖೆಯಿಂದಲೇ ನಿರ್ವಹಣೆ ಮಾಡುತ್ತಿರು ವುದರಿಂದ ಆದಾಯವೂ ಹೆಚ್ಚಾಗುತ್ತಿದೆ. ಕಳೆದ ವರ್ಷ 14 ಈಜುಕೊಳದಿಂದ 24.88 ಲಕ್ಷ ರೂ. ಆದಾಯ ಬಂದಿದ್ದು, ಈ ವರ್ಷದಲ್ಲಿ 58.2 ಲಕ್ಷ ರೂ. ಆದಾಯ ಬಂದಿದೆ ಎಂಬ ಮಾಹಿತಿ ನೀಡಿದರು. ಕ್ರೀಡಾ ನೀತಿಗೆ ಸಂಬಂಧಿಸಿದ ನಾಲ್ಕು ವಿಭಾಗದಲ್ಲಿ ಸಭೆ ಕರೆದು, ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಿ, ನೀತಿಯನ್ನು ಅಂತಿಮ ಗೊಳಿಸಿದ್ದೇವೆ. ನಮ್ಮ ಅವಧಿ ಮುಗಿಯುವುದರೊಳಗೆ ಕ್ರೀಡಾ ನೀತಿ ಅನುಷ್ಠಾನ ಮಾಡಲಿದ್ದೇವೆ ಎಂದರು. 

ಪ್ರತ್ಯೇಕ ಹಾಸ್ಟೆಲ್‌: ಜಿಲ್ಲಾ ಮಟ್ಟದ ಮಹಿಳಾ ಮತ್ತು ಪುರುಷರ ಹಾಸ್ಟೆಲ್‌ಗ‌ಳನ್ನು ಪ್ರತ್ಯೇಕಿ ಸುವ ಕಾರ್ಯ ನಡೆಯುತ್ತಿದೆ. ಬೆಳಗಾವಿ, ದಾವಣಗೆರೆ, ವಿಜಯಪುರ ಹಾಗೂ ಉಡುಪಿ ಯಲ್ಲಿ ತಲಾ 1 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಹಾಸ್ಟೆಲ್‌ ನಿರ್ಮಾಣ ಮಾಡುತ್ತಿದ್ದೇವೆ. ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶ ಯುಕ್ತ ಆಹಾರ ನೀಡುತ್ತಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next