Advertisement
ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಒಟ್ಟು ಐದು ರಾಜ್ಯಗಳಿಗೆ ನೂತವ ರಾಜ್ಯಪಾಲರ ನೇಮಕವಾಗಿದೆ. ಕೇಂದ್ರ ಸರಕಾರ ಕಳುಹಿಸಿರುವ ನೂತನ ರಾಜ್ಯಪಾಲ ಪಟ್ಟಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
Related Articles
Advertisement
ತ್ರಿವಳಿ ತಲಾಖ್ ನಷೇಧಕ್ಕೆ ಪಟ್ಟು ಹಿಡಿದು ಹೋರಾಟ ಮಾಡಿದ್ದ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳ ರಾಜ್ಯಕ್ಕೆ ರಾಜ್ಯಪಾಲರಾಗಿ ಆಯ್ಕೆ ಮಾಡಲಾಗಿದೆ. ಪಿ. ಸತಸಿವಂ ಈ ಹಿಂದೆ ಕೇರಳ ರಾಜ್ಯದ ರಾಜ್ಯಪಾಲರಾಗಿದ್ದರು.
ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷೆ ಡಾ, ತಮಿಳಿಸಾಯಿ ಸೌಂದರ್ ರಾಜನ್ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರಾಗಿ ಆಯ್ಕೆ ಮಾಡಲಾಗಿದೆ. ತೆಲಂಗಾಣದಲ್ಲಿ ಈ ಹಿಂದೆ ನರಸಿಂಹನ್ ರಾಜ್ಯಪಾಲರಾಗಿದ್ದರು.