Advertisement

ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

01:28 PM Sep 01, 2019 | Team Udayavani |

ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಿ ರವಿವಾರ ಅದೇಶ ಹೊರಡಿಸಿದ್ದಾರೆ.

Advertisement

ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಒಟ್ಟು ಐದು ರಾಜ್ಯಗಳಿಗೆ ನೂತವ ರಾಜ್ಯಪಾಲರ ನೇಮಕವಾಗಿದೆ. ಕೇಂದ್ರ ಸರಕಾರ ಕಳುಹಿಸಿರುವ ನೂತನ ರಾಜ್ಯಪಾಲ ಪಟ್ಟಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಹಿರಿಯ ಬಿಜೆಪಿ ನಾಯಕ ಕಲ್ರಾಜ್‌ ಮಿಶ್ರಾ ಅವರನ್ನು ರಾಜಸ್ಥಾನದ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ. ಕಲ್ಯಾಣ್‌ ಸಿಂಗ್‌ ಇಲ್ಲಿಯವರೆಗೆ ರಾಜಸ್ಥಾನದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಹಿಮಾಚಲ ಪ್ರದೇಶದಲ್ಲಿ ತೆರವಾದ ಸ್ಥಾನಕ್ಕೆ ಬಂಡಾರು ದತ್ತಾತ್ರೇಯ ಅವರನ್ನು ಆಯ್ಕೆ ಮಾಡಲಾಗಿದೆ.  ಮೊದಲ ಅವಧಿಯ ಮೋದಿ ಸರಕಾರದಲ್ಲಿ ಬಂಡಾರು ದತ್ತಾತ್ರೇಯ ಅವರು ಸಚಿವರಾಗಿದ್ದರು.

ಮಹಾರಾಷ್ಟ್ರ ರಾಜ್ಯಕ್ಕೆ ಉತ್ತರಾಖಂಡ್‌ ನ ಹಿರಿಯ ಬಿಜೆಪಿ ನಾಯಕ ಭಗತ್‌ ಸಿಂಗ್‌ ಕೋಶ್ಯಾರಿ ಅವರನ್ನು ರಾಜ್ಯಪಾಲರಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ವಿದ್ಯಾಸಾಗರ್‌ ರಾವ್‌ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು.

Advertisement

ತ್ರಿವಳಿ ತಲಾಖ್‌ ನಷೇಧಕ್ಕೆ ಪಟ್ಟು ಹಿಡಿದು ಹೋರಾಟ ಮಾಡಿದ್ದ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ಕೇರಳ ರಾಜ್ಯಕ್ಕೆ ರಾಜ್ಯಪಾಲರಾಗಿ ಆಯ್ಕೆ ಮಾಡಲಾಗಿದೆ. ಪಿ.  ಸತಸಿವಂ ಈ ಹಿಂದೆ ಕೇರಳ ರಾಜ್ಯದ ರಾಜ್ಯಪಾಲರಾಗಿದ್ದರು.

ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷೆ ಡಾ, ತಮಿಳಿಸಾಯಿ ಸೌಂದರ್‌ ರಾಜನ್‌ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರಾಗಿ ಆಯ್ಕೆ ಮಾಡಲಾಗಿದೆ.  ತೆಲಂಗಾಣದಲ್ಲಿ ಈ ಹಿಂದೆ ನರಸಿಂಹನ್‌ ರಾಜ್ಯಪಾಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next