Advertisement

Kerala Govt.; ಕೇರಳದಿಂದ ವಿದೇಶಾಂಗ ಕಾರ್ಯದರ್ಶಿ ನೇಮಕ ಅಸಾಂವಿಧಾನಿಕ: ಸಂಸದ

10:19 PM Jul 22, 2024 | Team Udayavani |

ನವದೆಹಲಿ: ಕೇರಳ ಸರ್ಕಾರ ಐಎಎಸ್‌ ಅಧಿಕಾರಿಯೊಬ್ಬರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಅಸಾಂವಿಧಾನಿಕ ಮಾತ್ರವಲ್ಲದೇ ಕೇಂದ್ರದ ಆಡಳಿತದಲ್ಲಿ ಹಸ್ತಕ್ಷೇಪ ಎಂದು ಬಿಜೆಪಿ ಸಂಸದ ಪಿ.ಪಿ.ಚೌಧರಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಸೋಮವಾರ ಈ ವಿಚಾರ ಪ್ರಸ್ತಾಪಿಸಿದ ಚೌಧರಿ, ಐಎಎಸ್‌ ಅಧಿಕಾರಿ ಕೆ.ವಾಸುಕಿಯವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ಜು.15ರಂದು ನೇಮಕ ಮಾಡುವುದರ ಮೂಲಕ ಕೇರಳ ಸರ್ಕಾರ ತನ್ನನ್ನು ತಾನು ಬೇರೆ ದೇಶ ಎಂದು ಪರಿಗಣಿಸಿದೆ.

ನಿಯಮ ಪ್ರಕಾರ ವಿದೇಶಾಂಗ ಕಾರ್ಯದರ್ಶಿ ನೇಮಕಾತಿ ವಿದೇಶಾಂಗ ಸಚಿವಾಲಯದಿಂದ ನಡೆಯುತ್ತದೆ. ಆದ್ದರಿಂದ ರಾಜ್ಯ ಸರ್ಕಾರದ ಈ ನಡೆ ನಿಯಮ ಬಾಹಿರ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next