Advertisement

CJI ಇಲ್ಲದೆ ಚುನಾವಣ ಆಯುಕ್ತರ ನೇಮಕ: ಕೇಂದ್ರ ಸರಕಾರ ಸಮರ್ಥನೆ

01:09 AM Mar 21, 2024 | Team Udayavani |

ಹೊಸದಿಲ್ಲಿ: ಚುನಾವಣ ಆಯುಕ್ತರ ನೇಮಕ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟಿರುವ ತನ್ನ ನಿರ್ಧಾರವನ್ನು ಕೇಂದ್ರ ಸರಕಾರವು ಸಮರ್ಥಿಸಿಕೊಂಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿರುವ ಸರಕಾರವು, “ಆಯ್ಕೆ ಸಮಿತಿಯಲ್ಲಿ ನ್ಯಾಯಾಂಗ ಸದಸ್ಯರಿರುವ ಕಾರಣಕ್ಕೇ ಸ್ವತಂತ್ರ ಚುನಾವಣ ಆಯೋಗ ಸೃಷ್ಟಿಯಾಗಲಿದೆ ಎಂದೇನೂ ಇಲ್ಲ’ ಎಂದು ಹೇಳಿದೆ.

Advertisement

ಚುನಾವಣ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಕಾನೂನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ಮೊದಲೇ ತುರಾತುರಿಯಲ್ಲಿ ಖಾಲಿ ಇರುವ 2 ಚುನಾವಣ ಆಯುಕ್ತರ ಹುದ್ದೆಗೆ ನೇಮಕಾತಿ ಮಾಡಲಾಗಿದೆ ಎಂಬ ಅರ್ಜಿದಾರರ ವಾದವನ್ನು ಸರಕಾರ ತಳ್ಳಿ ಹಾಕಿದೆ.

ಆಯುಕ್ತರ ನೇಮಕಕ್ಕೆ ಸಂಬಂಧಿ ಸಿದಂತೆ ಸಂಭಾವ್ಯ ಪಟ್ಟಿಯನ್ನು ವಿಪಕ್ಷ ನಾಯಕರಿಗೆ ಸಲ್ಲಿಕೆಯಾಗಿಲ್ಲ ಎಂಬ ವಾದವನ್ನು ತಳ್ಳಿ ಹಾಕಿರುವ ಕೇಂದ್ರವು, ಶೋಧ ಸಮಿತಿ ಅಂತಿಮಗೊಳಿಸಿ 6 ಮಂದಿ ಸಂಭಾವ್ಯರ ಪಟ್ಟಿಯನ್ನು ಮಾ.13ರಂದೇ ನೀಡಲಾಗಿತ್ತು ಎಂದು ಕೇಂದ್ರ ಸರಕಾರವು ತನ್ನ ಅಫಿದವಿತ್‌ನಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next