Advertisement

Four ವಿ.ವಿ.ಗಳಿಗೆ ಶೀಘ್ರ ಕುಲಪತಿಗಳ ನೇಮಕ: ಸಚಿವ ಡಾ| ಎಂ.ಸಿ. ಸುಧಾಕರ್‌

11:20 PM Dec 16, 2023 | Team Udayavani |

ಉಳ್ಳಾಲ: ಉನ್ನತ ಶಿಕ್ಷಣ ಇಲಾಖೆಯಡಿ ಖಾಲಿ ಇರುವ ಬೋಧಕ, ಬೋಧಕೇತರ ಸಿಬಂದಿಗಳ ನೇಮಕಾತಿಗೆ ಕ್ರಮ, ನೆನೆಗುದಿಗೆ ಬಿದ್ದಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮಂಗಳೂರು ವಿ.ವಿ. ಸೇರಿದಂತೆ ರಾಜ್ಯದ ನಾಲ್ಕು ವಿವಿಗಳಲ್ಲಿ ಶೀಘ್ರವೇ ಖಾಯಂ ಕುಲಪತಿಗಳ ನೇಮಕ ನಡೆಯಲಿದೆ ಎಂದು ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ತಿಳಿಸಿದರು.

Advertisement

ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೇಮಕಾತಿ ಮುಖ್ಯವಾಗಿದ್ದು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೆಇಎ ಅಥವಾ ಉನ್ನತ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲಾಗುವುದು.

ವಿವಿಯಲ್ಲಿ ಕುಲಸಚಿವರಾಗಿ ಐಎಎಸ್‌ ಅಥವಾ ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ಆಡಳಿತಾತ್ಮಕವಾಗಿ ಸಹಕಾರಿಯಾಗಲಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next