Advertisement

Council session; ಮಾನವೀಯತೆ ಆಧಾರದಲ್ಲಿ 28 ಮಂದಿಗೆ ನೇಮಕಾತಿ ಪತ್ರ: ಪರಮೇಶ್ವರ್‌

11:04 PM Feb 23, 2024 | Team Udayavani |

ಬೆಂಗಳೂರು: ವಿವಿಧ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ 2012ನೇ ಸಾಲಿನಲ್ಲಿ ನಡೆದ ಭರ್ತಿ ಪ್ರಕ್ರಿಯೆಯಲ್ಲಿ ನೇಮಕಾತಿ ಆದೇಶಗಳನ್ನು ಪಡೆದುಕೊಳ್ಳದ 28 ಮಂದಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೇಮಕಾತಿ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

Advertisement

ಬಿಜೆಪಿಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, 750 ಪೊಲೀಸ್‌ ಹುದ್ದೆಗಳ ನೇಮಕಾತಿಗೆ 2012ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ 354 ಮಂದಿ ಆಯ್ಕೆಗೊಂಡಿದ್ದರು. ದೈಹಿಕ ಸಾಮರ್ಥ್ಯ ಮತ್ತು ಇತರ ಅರ್ಹತೆಗಳಿದ್ದರೂ ಕಡಿಮೆ ಅಂಕಗಳು ಇರುವ ಕಾರಣಕ್ಕೆ 488 ಅಭ್ಯರ್ಥಿಗಳ ಪಟ್ಟಿ ಉಳಿದಿತ್ತು. ಇದರಲ್ಲಿ 111 ಮಂದಿ ನೇಮಕಾತಿ ಆದೇಶ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಳಿದವರು ಮಾನವೀಯತೆ ಆಧಾರದಲ್ಲಿ ಒಂದು ಬಾರಿಗೆ ಅಂತಿಮ ಅವಕಾಶ ನೀಡುವ ಸಂಬಂಧ ವರದಿ ಸಲ್ಲಿಸಲು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಇಲಾಖೆ ವರದಿಯ ನಿರೀಕ್ಷೆಯಲ್ಲಿದೆ. ಈ 28 ಅಭ್ಯರ್ಥಿಗಳಿಗೆ ಸಂಬಂಧಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಚಿವ ಸಂಪುಟದ ಮುಂದೆ ತಂದು ಮಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next