Advertisement

BJP: ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ನಿಯುಕ್ತಿ

10:04 PM Jan 16, 2024 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ. ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪುತ್ರ ಉಮೇಶ್‌ ಕಾರಜೋಳ ಅವರನ್ನು ನಿಯುಕ್ತಿ ಮಾಡಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರನ್ನು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಿದ್ದಾರೆ.

Advertisement

ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ:
ಮಹಿಳಾ ಮೋರ್ಚಾ: ಶಿಲ್ಪಾ ಟಿ.ಸುವರ್ಣ(ಉಡುಪಿ ಜಿಲ್ಲೆ) , ಡಾ.ಶೋಭಾ ಸಂಗನಗೌಡ(ಹಾವೇರಿ).

ಯುವ ಮೋರ್ಚಾ : ಹರೀಶ್‌ ಪೂಂಜಾ(ದಕ್ಷಿಣ ಕನ್ನಡ), ಸಂದೀಪ್‌ ರವಿ(ಬೆಂಗಳೂರು ದಕ್ಷಿಣ).

ಎಸ್‌ಟಿ ಮೋರ್ಚಾ : ಕೃಷ್ಣಾ ನಾಯಕ್‌(ಮೈಸೂರು), ಬಸವರಾಜ ಹುಂದ್ರಿ(ಚಿಕ್ಕೋಡಿ).

ಎಸ್‌ಸಿ ಮೋರ್ಚಾ : ಉಮೇಶ್‌ ಕಾರಜೋಳ (ಬಾಗಲಕೋಟೆ), ಮಹೇಂದ್ರ ಕೌತಾಳ(ಹುಬ್ಬಳ್ಳಿ-ಧಾರವಾಡ).

Advertisement

ಹಿಂದುಳಿದ ವರ್ಗಗಳ ಮೋರ್ಚಾ :ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ), ಸೋಮಶೇಖರ್‌(ಬೆಂಗಳೂರು ದಕ್ಷಿಣ).

ರೈತ ಮೋರ್ಚಾ : ಡಾ.ಬಿ.ಸಿ.ನವೀನ್‌ ಕುಮಾರ್‌(ಕೊಡಗು), ಕಲ್ಮರುಡಪ್ಪ(ಚಿಕ್ಕಮಗಳೂರು).

ಅಲ್ಪಸಂಖ್ಯಾತ ಮೋರ್ಚಾ : ಇಂದ್ರ ಕುಮಾರ್‌ (ಬೆಂ.ದಕ್ಷಿಣ), ರೌಫ‌ುದ್ದೀನ್‌ ಕಛೇರಿವಾಲೆ(ಬೀದರ್‌).

Advertisement

Udayavani is now on Telegram. Click here to join our channel and stay updated with the latest news.

Next