Advertisement

ವಿವಿಧ ಹಕ್ಕುಗಳಿಗೆ ಆಗ್ರಹಿಸಿ ರೈತರಿಂದ ಮನವಿ

09:37 AM Aug 11, 2020 | Suhan S |

ಬನಹಟ್ಟಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾದ ಸರ್ಕಾರ ಎಂದು ಹೇಳಿ ಲಾಕ್‌ಡೌನ್‌ ಸಂದರ್ಭದಲ್ಲಿ ಅನೇಕ ಕಾಯ್ದೆ ಕಾನೂನುಗಳನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತಂದಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕಾನೂನುಗಳನ್ನು ವಾಪಸ್‌ ಪಡೆಯಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಆಗ್ರಹಿಸಿದರು.

Advertisement

ಸೋಮವಾರ ಸ್ಥಳೀಯ ತಹಶೀಲ್ದಾರ್‌ ಕಾರ್ಯಾಲಯದ ಉಪತಹಶೀಲ್ದಾರ್‌ ಎಸ್‌. ಎಲ್‌. ಕಾಗಿಯವರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಎಪಿಎಂಸಿ ಕಾಯ್ದೆಯಲ್ಲಿ ಅನಾನುಕೂಲತೆಗಳಿವೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್‌ ಕಾಯ್ದೆ, ಬೀಜದ ಹಕ್ಕು, 2019ರಲ್ಲಿ ಜಾರಿಗೆ ಬಂದ ಭೂ ಸ್ವಾಧೀನ ಕಾಯ್ದೆ ರೈತ ವಿರೋಧಿಯಾಗಿದ್ದು, ಅದನ್ನು ಕೂಡಲೇ ವಾಪಸ್‌ ಪಡೆಯಬೇಕು. ಅಗತ್ಯ ವಸ್ತುಗಳ ಕಾಯ್ದೆಯನ್ನು ಕೂಡಾ ವಾಪಸ್‌ ಪಡೆಯಬೇಕು ಮತ್ತು ಮಾದರಿ ಭೂ ಗುತ್ತಿಗೆ ಮಸೂದೆ 2016 ರೈತ ವಿರೋಧಿಯಾಗಿದ್ದು ಕೂಡಲೇ ವಾಪಸ್‌ ಪಡೆಯಬೇಕು ಎಂದು ಬಸವಂತ ಕಾಂಬಳೆ ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಕಾಯ್ದೆಗಳನ್ನು ಯಾವುದೆ ತಜ್ಞರ ಜತೆಗೆ ಚರ್ಚೆ ಮಾಡದೆ ಜಾರಿಗೆ ತಂದಿದೆ. ಆದ್ದರಿಂದ ರೈತ ವಿರೋಧಿಯಾದ ಈ ಎಲ್ಲ ಕಾನೂನುಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದುಕೊಳ್ಳಬೇಕು ಎಂದರು. ಸಿದ್ದಪ್ಪ ಉಳ್ಳಾಗಡ್ಡಿ, ಮಲ್ಲಿಕ ದೇಸಾಯಿ, ಶಿವು ನಾಗನೂರ, ಕಲ್ಲಪ್ಪ ಬಳಿಗಾರ, ಅವಧೂತ ಒಡೆಯರ, ಮಾಯಪ್ಪ ತುರಾದಿ, ಬಸು ಮಲೋಡಿ, ದುಂಡಪ್ಪ ಕುಡಚಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next