Advertisement

ರಿಂಗ್‌ರೋಡ್‌ ಕಾಮಗಾರಿಗೆ ಮನವಿ

10:48 AM Apr 24, 2022 | Team Udayavani |

ಆಳಂದ: ಬಹುದಿನಗಳ ಬೇಡಿಕೆ ಯಾಗಿರುವ ಆಳಂದ ಪಟ್ಟಣಕ್ಕೆ ವರ್ಥುಲ ರಸ್ತೆ (ರಿಂಗ್‌ರೋಡ್‌) ಕಾಮಗಾರಿ ಸೇರಿದಂತೆ ಇನ್ನಿತರ ಬೇಡಿಕೆಗಳ ಕಾಮಗಾರಿಗೆ ಮಂಜೂರಾತಿ ನೀಡಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.

Advertisement

ಕಲಬುರಗಿಯಲ್ಲಿ ಆಗಮಿಸಿದ್ದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಶಾಸಕರು, ಆಳಂದ ಪಟ್ಟಣವು ಕರ್ನಾಟಕ ಮಹಾರಾಷ್ಟ್ರ,ಆಂಧ್ರಪ್ರದೇಶಕ್ಕೆ ಸಂಪರ್ಕ ಒದಗಿಸುವ ಪ್ರಮುಖ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ಹೊರವಲಯಕ್ಕೆ ವರ್ಥುಲ ರಸ್ತೆ ನಿರ್ಮಾಣ ಕಾಮಗಾರಿ ಬಹುದಿನಗಳ ಬೇಡಿಕೆಯಾಗಿದ್ದು, ಇದು ಸುಮಾರು 25ಕಿ.ಮೀ ವರ್ಥುಲ ರಸ್ತೆ ಆಗಲಿದೆ. ಇದರ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಶಾಶ್ವತ ಮತ್ತು ಸಮರ್ಪಕವಾಗಿ ಎಲ್ಲ ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸಲು ಹೊಸ ಪೈಪಲೈನ್‌ ಕಾಮಗಾರಿಗೆ 118 ಕೋಟಿ ರೂ. ಅಗತ್ಯವಾಗಿದೆ. ಅಲ್ಲದೆ 100 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಕೈಗೊಳ್ಳಲು ಆದೇಶಿಸುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಮುಖ್ಯ ಮಂತ್ರಿಗಳು ಸ್ಪಂದಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next