Advertisement

ಜನತಾ ಕರ್ಫ್ಯೂ ಆಚರಿಸುವಂತೆ ಮನವಿ

11:55 PM Mar 20, 2020 | Lakshmi GovindaRaj |

ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಜನತಾ ಕರ್ಫ್ಯೂವನ್ನು ಆಚರಿಸುವಂತೆ ರಾಜ್ಯಪಾಲ ವಿ.ಆರ್‌.ವಾಲಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಭಾನುವಾರ ಸಂಜೆ 5 ಗಂಟೆಗೆ ವೈದ್ಯರು, ಅರೆವೈದ್ಯ ಕೀಯ ಸಿಬ್ಬಂದಿ, ಮಾಧ್ಯಮ ದವರು, ಸ್ವತ್ಛತೆ ನಿರ್ವಹಿಸುತ್ತಿರವ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆಗೆ ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಸಲ್ಲಿಸೋಣ.

Advertisement

ಇನ್ನು ಕೋವಿಡ್‌-19 ವಿರುದ್ಧ ಹೋರಾಡುವ ಕುರಿತು ಪ್ರಧಾನಿ ಗಳು ನೀಡಿರುವ ಸಾಮಾಜಿಕ ಗುಂಪಿನಿಂದ ದೂರ ಇರು ವುದು, 60 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿ ನವರು ಮನೆಯಲ್ಲಿಯೇ ಇರುವುದು, ಸಾಮಾನ್ಯ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಬಾರದು ಎಂಬ ಅಂಶಗಳನ್ನು ನೆನಪಿನಲ್ಲಿಡಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next