Advertisement

ರೈತರಿಗೆ ನ್ಯಾಯ ಒದಗಿಸಲು ಮನವಿ

01:19 PM Mar 03, 2022 | Team Udayavani |

ಗುರುಮಠಕಲ್‌: ತಾಲೂಕಿನ ಚಂಡರಕಿ ಗ್ರಾಮದ ಹೊರವಲಯದಲ್ಲಿ ಗಮೇಶ ವಿಂಡ್‌ ಪವರ್‌ ಕಂಪೆನಿಯವರು ಪವನ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಿದ್ದು, ಅದರಿಂದ ರೈತರಿಗೆ ಅನ್ಯಾಯವಾಗಿದೆ. ಕೂಡಲೆ ಸಂಬಂಧಿತ ರೈತರಿಗೆ ನ್ಯಾಯ ಒದಗಿಸುವಂತೆ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಕರ್ತರು ಪಿಐ ಖಾಜಾ ಹುಸೇನ್‌ಗೆ ಮನವಿ ಸಲ್ಲಿಸಿದರು.

Advertisement

ಚಂಡರಕಿ ಗ್ರಾಮದಲ್ಲಿ ಕೆಲ ರೈತರ ಜಮೀನುಗಳಲ್ಲಿ ಯಾವುದೆ ಪರಿಹಾರ ನೀಡದೆ ರಸ್ತೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲ ಜಮೀನುಗಳಲ್ಲಿ ರೈತರಿಗೆ ಪರಿಹಾರ ನೀಡದೆ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಿದ್ದಾರೆ. ಆದ್ದರಿಂದ ಕೂಡಲೆ ಸಂಬಂಧಿತ ಕಂಪೆನಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರಿಗಾದ ಅನ್ಯಾಯ ಸರಿಪಡಿಸುವಂತೆ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕ ಅಧ್ಯಕ್ಷ ನಾಗೇಶ ಗದ್ದಗಿ ಆಗ್ರಹಿಸಿದರು.

ಸಂಘಟನೆ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಕಲವಾರ, ಕಾರ್ಯಾಧ್ಯಕ್ಷ ನರಸಿಂಹ ಗಂಗನೋಳ, ಪ್ರಧಾನ ಕಾರ್ಯದರ್ಶಿ ಲಾಲಪ್ಪ ತಲಾರಿ, ರೈತ ಘಟಕದ ಅಧ್ಯಕ್ಷ ರಾಮುಲು ಕೊಡಗಂಟಿ, ಶಂಕರ ನಾಗವೋಳ, ನಾರಾಯಣ ಮಜ್ಜಿಗೆ, ಕನ್ನಯ್ಯ ಪಡಿಗೆ, ಅಂಜಿ ಮಂಗನೋಳ, ಜೇಮ್ಲಾ ನಾಯಕ, ಅಯಾಜ್‌ ಅಲಿ, ಅಶೋಕ ಗಾಣಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next