Advertisement

ಸ್ಮಶಾನ ಮಂಜೂರಾತಿಗೆ ಮನವಿ

06:52 AM May 22, 2020 | Suhan S |

ಮೊಳಕಾಲ್ಮೂರು: ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮಕ್ಕೆ ರುದ್ರಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಗುರುವಾರ ತಹಶೀಲ್ದಾರ್‌ ಎಂ. ಬಸವರಾಜ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಚಿಕ್ಕೋಬನಹಳ್ಳಿ ಗ್ರಾಮ ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲ. ಹಲವಾರು ವರ್ಷಗಳಿಂದ ಚಿಕ್ಕೋಬನಹಳ್ಳಿ ಗ್ರಾಮ ವ್ಯಾಪ್ತಿಯ ಸನಂ 12/1 ಬಿ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಎಲ್ಲಾ ಸಮುದಾಯದವರಿಗೆ ಶವಸಂಸ್ಕಾರ ಮಾಡಲು ಸೂಕ್ತ ಮತ್ತು ನಿರ್ದಿಷ್ಟ ಜಾಗ ಮಂಜೂರು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿ.ಬಿ. ಸಣ್ಣಬೋರಯ್ಯ, ಗೌಡರ ಪಾಪಣ್ಣ, ಡಿ.ಒ. ಮುರಾರ್ಜಿ, ಕೆ.ಸಿ. ಮಂಜಣ್ಣ, ವೆಂಕಟೇಶ, ಕೆ.ಆರ್‌. ಬೋಜಪ್ಪ, ಗುರುನಾಥ, ಸಾದಿಕ್‌ ಬಾಷಾ, ಗಜ್ಜಗನ ಬೋರಯ್ಯ, ತಿಪ್ಪೇರುದ್ರಪ್ಪ, ಜೆ.ಬಿ. ಒಬಯ್ಯ, ಜಿ.ಬಿ. ತಿಪ್ಪೇಸ್ವಾಮಿ, ಎಂ. ಪಾಲಯ್ಯ, ಡಿ.ಬಿ. ಓಬಯ್ಯ, ನಾಗರಾಜ್‌, ಸಿ.ಬಿ. ಕೊಲ್ಲಪ್ಪ, ಎಸ್‌.ಬಿ. ಪಾಪಯ್ಯ, ಎಚ್‌. ಬಸವರಾಜ್‌, ಗುರುಮೂರ್ತಿ, ಜಿ.ಬಿ. ಮಲ್ಲಿಕಾರ್ಜುನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next