Advertisement

ಮಂದಿರ ಧ್ವಂಸ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

11:43 AM Dec 22, 2019 | Team Udayavani |

ಇಳಕಲ್ಲ: ಬಂಜಾರರ ಆರಾದ್ಯ ದೈವ ಸಂತ ಶ್ರೀ ಸೇವಾಲಾಲ ಮಂದಿರವನ್ನು ಮತ್ತು ಮರಿಯಮ್ಮದೇವಿ ಮಂದಿರವನ್ನು ಧ್ವಂಸ ಮಾಡಿದ ಕಲಬುರಗಿ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ತಪ್ಪಿತಸ್ಥರನ್ನು ಬಂಧಿಸಬೇಕು ಮತ್ತು ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್‌ರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಲಂಬಾಣಿ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದರು.

Advertisement

ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಪ್ರವಾಸಿ ಮಂದಿರ, ಕನಕದಾಸರ ವೃತ್ತ, ಮಹಾಂತ ಗಂಗೋತ್ರಿ, ಬಸ್‌ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತಕ್ಕೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತ್ತು.ಸೇವಾಲಾಲ ಸಮಾಜದ ಧರ್ಮಗುರುಗಳು ಮಾತನಾಡಿ, ಕಲಬುರಗಿ ಜಿಲ್ಲೆಯ ಮಾದಿಹಾಳತಾಂಡಾದ ಸೇವಾಲಾಲ ಮಂದಿರವನ್ನು ಕಲಬುರಗಿ ವಿಮಾನ ಪ್ರಾಧಿಕಾರ ಧ್ವಂಸ ಮಾಡಿದೆ. ಇದರಿಂದಾಗಿ ರಾಜ್ಯದ ಲಂಬಾಣಿ ಸಮಾಜದವರಿಗೆ ಅನ್ಯಾಯವಾಗಿದ್ದು, ಕೂಡಲೇ ಆ ಮಂದಿರವನ್ನು ಪುನರ್‌ ನಿರ್ಮಿಸಬೇಕು ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಹನಮಂತಪ್ಪ ರಾಠೊಡ, ಕೃಷ್ಣಾ ರಾಠೊಡ, ಮುತ್ತಣ್ಣ ಜಾಧವ, ವಿಠಲ ಜಾಧವ, ಬಲಕುಂದಿ ಗ್ರಾಪಂ ಅಧ್ಯಕ್ಷ ಶರಣಪ್ಪ ರಾಠೊಡ, ಶರಣಪ್ಪ ಪವಾರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next