Advertisement

ಕರ್ನಾಟಕದ 42 ಬುಟ್ಟಿ ಮಾವಿನಹಣ್ಣು ಮುಟ್ಟುಗೋಲು,ಮೂವರಿಗೆ ದಂಡ

08:47 PM Mar 19, 2022 | Team Udayavani |

ಪುಣೆ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಬೆಳೆಯಲಾಗಿರುವ ಅಲ್ಫಾನ್ಸೊ ಮಾವಿನಹಣ್ಣೆಂದು ಹೇಳಿ, ಕರ್ನಾಟಕದಿಂದ ಕಳಿಸಲಾಗಿದ್ದ ಮಾವಿನಹಣ್ಣುಗಳನ್ನು ಮಾರುತ್ತಿದ್ದ ಮೂವರಿಗೆ ಪುಣೆಯ ಎಪಿಎಂಸಿಯಲ್ಲಿ ದಂಡ ಹಾಕಲಾಗಿದೆ. ಹಾಗೆಯೇ 42 ಮಾವಿನಹಣ್ಣಿನ ಬುಟ್ಟಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

Advertisement

ವಸ್ತುಸ್ಥಿತಿಯಲ್ಲಿ ಕರ್ನಾಟಕದಿಂದ ಕಳಿಸಲಾಗುವ ಅಲ್ಫಾನ್ಸೋ ಮಾವಿನಹಣ್ಣುಗಳು ರತ್ನಗಿರಿಯ ಅಲ್ಫಾನ್ಸೋ ತಳಿಗಿಂತ ಅಗ್ಗವಾಗಿರುತ್ತವೆ. ಆದರೆ ನೋಡಲು ಬಹಳ ವ್ಯತ್ಯಾಸಗಳೇನಿರುವುದಿಲ್ಲ. ಇದನ್ನೇ ಬಳಸಿಕೊಂಡ ಮೂವರು ಕರ್ನಾಟಕದ ತಳಿಯನ್ನೇ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಇದನ್ನು ಪತ್ತೆಹಚ್ಚಿದ ಅಧಿಕಾರಿಗಳು ಹಣ್ಣುಗಳನ್ನು ವಶಕ್ಕೆ ಪಡೆದಿದ್ದಾರೆ.

ಹಾಗಾದರೆ ಕರ್ನಾಟಕದ ಅಲ್ಫಾನ್ಸೋ ಮತ್ತು ಮಹಾರಾಷ್ಟ್ರದ ರತ್ನಗಿರಿಯ ಅಲ್ಫಾನ್ಸೋಗೂ ಏನು ವ್ಯತ್ಯಾಸವೆನ್ನುವುದು ನಿಮ್ಮ ಪ್ರಶ್ನೆಯೇ? ರಾಜ್ಯದ ತಳಿಯು ಬೆಳೆದ ಮೇಲೆ ಸುಕ್ಕುಗಟ್ಟುವುದಿಲ್ಲ. ರತ್ನಗಿರಿಯ ತಳಿಯಲ್ಲಿ ಇದು ಆಗುತ್ತದೆ. ಆದರೆ ರತ್ನಗಿರಿಯ ತಳಿ ಬಹಳ ಸಿಹಿಯಾಗಿರುತ್ತದೆ, ಜೊತೆಗೆ ಅದರ ಸಿಪ್ಪೆ ಕಾಗದದಷ್ಟು ತೆಳುವಾಗಿರುತ್ತದೆ. ಕರ್ನಾಟಕದ ತಳಿ ಇದಕ್ಕೆ ತದ್ವಿರುದ್ಧವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next