Advertisement

ಆಪೆನ್‌ಹೈಮರ್‌ನಲ್ಲಿ ಗೀತೆಯ ಸಾಲು ತೆಗೆಯಿರಿ: ಅನುರಾಗ್‌ ತಾಕೀತು

08:13 PM Jul 24, 2023 | Team Udayavani |

ನವದೆಹಲಿ: ಇತ್ತೀಚೆಗಷ್ಟೇ ಭಾರತದಲ್ಲಿ ತೆರೆಕಂಡ “ಆಪೆನ್‌ಹೈಮರ್‌’ ಚಿತ್ರದಲ್ಲಿ ಅನುಚಿತ ಸಂದರ್ಭದಲ್ಲಿ ಭಗವದ್ಗೀತೆ ಪಠಣೆ ಮಾಡುವ ದೃಶ್ಯಾವಳಿ ಇರುವುದರ ಬಗ್ಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಅಲ್ಲದೇ, ಆಕ್ಷೇಪಾರ್ಹ ದೃಶ್ಯವಿದ್ದರೂ ಸಿನಿಮಾ ಪ್ರದರ್ಶನಕ್ಕೆ ಅನುಮತಿಸಿದ್ದಕ್ಕಾಗಿ ಸೆನ್ಸಾರ್‌ ಮಂಡಳಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ವಿಶ್ವದ ಮೊದಲ ಪರಮಾಣು ಬಾಂಬ್‌ ನಿರ್ಮಾತೃ ರಾಬರ್ಟ್‌ ಆಪೆನ್‌ಹೈಮರ್‌ ಅವರ ಜೀವನಚರಿತ್ರೆ ಆಧಾರಿತ ಸಿನಿಮಾ ಇದಾಗಿದೆ.

ದೃಶ್ಯವೊಂದರಲ್ಲಿ ಲೈಂಗಿಕ ಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಳೆಯು ಪುರುಷನಿಗೆ ಭಗವದ್ಗೀತೆಯ ಶ್ಲೋಕ ಓದುವಂತೆ ಕೇಳಿರುವ ಹಾಗೂ ಆತ ಶ್ಲೋಕ ಪಠಿಸುವಂತೆ ಚಿತ್ರಿಸಲಾಗಿದೆ. ಹಿಂದೂಗಳ ಪವಿತ್ರಗ್ರಂಥವನ್ನು ಈ ರೀತಿ ಅನುಚಿತ ಸಂದರ್ಭದಲ್ಲಿ ಬಳಕೆ ಮಾಡಿರುವ ಬಗ್ಗೆ ಠಾಕೂರ್‌ ಆಕ್ಷೇಪಿಸಿದ್ದಾರೆ.

ದೃಶ್ಯ ಕತ್ತರಿಸದೇ ಸಿನಿಮಾ ಬಿಡುಗಡೆಗೊಳಿಸಿರುವ ಕಾರಣ ಸೆನ್ಸಾರ್‌ ಮಂಡಳಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next