Advertisement

ಅನುಪಮಾ ಶೆಣೈಗೆ ಜೀವ ಬೆದರಿಕೆ: ದೂರು ದಾಖಲು

11:27 PM May 10, 2019 | Lakshmi GovindaRaj |

ಪಡುಬಿದ್ರಿ: ತನಗೆ ದೂರವಾಣಿ ಮೂಲಕ ಜೀವ ಬೆದ ರಿಕೆ ಒಡ್ಡಲಾಗುತ್ತಿದೆ ಎಂದು ಮಾಜಿ ಪೊಲೀಸ್‌ ಅಧಿಕಾರಿ, ಉಚ್ಚಿಲ ನಿವಾಸಿ ಅನುಪಮಾ ಶೆಣೈ ಅವರು ಆಸೀಫ್‌ ಹನೀಫ್‌ ಹಾಗೂ ಇನ್ನಿಬ್ಬರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಆರೋಪಿಗಳು ಇಂಟರ್‌ನೆಟ್‌ ಕಾಲ್‌ ಮೂಲಕ ತನ್ನಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಹಣ ನೀಡದಿದ್ದಲ್ಲಿ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿಯೂ ದೂರಿನಲ್ಲಿ ಆರೋಪಿಸಿದ್ದಾರೆ.

ಅನುಪಮಾ ಶೆಣೈ ಅವರು ಫೇಸ್‌ಬುಕ್‌ ಮೂಲಕ ಇಸ್ಲಾಂ ವಿರುದ್ಧ ಪೋಸ್ಟ್‌ ಮಾಡುತ್ತಿದ್ದಾರೆಂದು ಆರೋಪಿಸಿ ಆಸೀಫ್ ಅವರು ಕೆಲವು ದಿನಗಳ ಹಿಂದೆ ದೂರು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next