Advertisement

“ಕಾರ್ಮಿಕ ವಿರೋಧಿ ಅಧ್ಯಾದೇಶ ಕೋವಿಡ್ ಕ್ಕಿಂತ ಭೀಕರ’

09:29 AM May 25, 2020 | mahesh |

ಬೆಳ್ತಂಗಡಿ: ರಾಜ್ಯ ಸರಕಾರವು ಹೊರಡಿಸಲುದ್ದೇಶಿಸಿದ ಕಾರ್ಮಿಕ ವಿರೋಧಿ ಅಧ್ಯಾದೇಶ ಕಾರ್ಮಿಕರಿಗೆ ಕೋವಿಡ್ ಕ್ಕಿಂತಲೂ ಭೀಕರ ಸಮಸ್ಯೆ ತಂದೊಡ್ಡಲಿದೆ ಎಂದು ಹಿರಿಯ ಕಾರ್ಮಿಕ ನಾಯಕ, ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್‌ ಹೇಳಿದರು.

Advertisement

ತಾಲೂಕಿನ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಡಿ ಇಲ್ಲಿನ ಮಿನಿ ವಿಧಾನ ಸೌಧ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಮೇ ತಿಂಗಳ ಮೇ ದಿನಾಚೆಣೆಯ ಮಹತ್ವವನ್ನೇ ಮರೆತು 8 ಗಂಟೆಗಳ ಕೆಲಸದ ಅವಧಿಯನ್ನು ಹೆಚ್ಚಿಸಲು ನಿರ್ಧರಿಸಿರುವುದು, ಮಾಲಕರಿಗೆ ಹಲವು ರಿಯಾಯಿತಿಗಳನ್ನು ನೀಡಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡಿರುವುದು ರಾಜ್ಯ ಸರಕಾರ ಕಾರ್ಮಿಕರಿಗೆ ಮಾಡುತ್ತಿರುವ ಅತಿದೊಡ್ಡ ದ್ರೋಹವಾಗಿದೆ ಎಂದರು.

ಸಿಐಟಿಯು ತಾಲೂಕು ಅಧ್ಯಕ್ಷ ಎಲ್‌.ಮಂಜುನಾಥ್‌ ಮಾತನಾಡಿದರು. ಪಟ್ರಮೆ ಗ್ರಾ.ಪಂ. ಸದಸ್ಯರಾದ ಶ್ಯಾಮ ರಾಜ್‌ ಪಟ್ರಮೆ, ಸಂಜೀವ ನಾಯ್ಕ, ಧನಂಜಯಗೌಡ, ರಾಮಚಂದ್ರ, ಗಣೇಶ, ಚನಿಯಪ್ಪ, ಜಯರಾಮ ಮಯ್ಯ, ಶೇಖರ ವಿಜಿ, ಜಯಶ್ರೀ, ಪುಷ್ಪಾ, ಅದಿತಿ, ವಿನುಶ ರಮಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next