Advertisement

ಕಾಶ್ಮೀರ ವಿಚಾರದ ಬ್ಯಾನರ್‌ ಹಾರಾಟ: ಐಸಿಸಿಗೆ ಬಿಸಿಸಿಐ ಪ್ರಶ್ನೆ

10:05 AM Jul 08, 2019 | Team Udayavani |

ಲೀಡ್ಸ್‌: ಭಾರತ-ಶ್ರೀಲಂಕಾ ಪಂದ್ಯದ ವೇಳೆ “ಕಾಶ್ಮೀರಕ್ಕೆ ನ್ಯಾಯ ಸಿಗಬೇಕು, ಭಾರತ ಜನಾಂಗೀಯ ಹತ್ಯೆ ನಿಲ್ಲಿಸಬೇಕು’ ಎಂಬ ಫ‌ಲಕ ನೇತಾಡುತ್ತಿದ್ದ ಬಗ್ಗೆ ಬಿಸಿಸಿಐ ಭಾನುವಾರ ಐಸಿಸಿಗೆ ದೂರು ನೀಡಿದೆ.

Advertisement

ಐಸಿಸಿಗೆ ಲಿಖೀತ ರೂಪದಲ್ಲಿ ದೂರು ನೀಡಿರುವ ಬಿಸಿಸಿಐ ,ಭಾರತ ತಂಡದ ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತ ಪಡಿಸಿದೆ.

ಕಾಶ್ಮೀರದಲ್ಲಿ ಹತ್ಯಾಕಾಂಡ ನಿಲ್ಲಿಸಿ ಎಂಬ ಫ‌ಲಕ ನೇತಾಡುತ್ತಿದ್ದ 2 ವಿಮಾನಗಳು ಕ್ರೀಡಾಂಗಣದ ಮೇಲೆ ಹಾರಾಡಿದ್ದು ಗಮನಕ್ಕೆ ಬಂದಿತ್ತು.

ಘಟನೆಗೆ ಐಸಿಸಿ ತೀವ್ರ ಬೇಸರ ‌ವ್ಯಕ್ತಪಡಿಸಿದೆ. ಇಂತಹ ರಾಜಕೀಯ ಬೆಳವಣಿಗೆಯನ್ನುಐಸಿಸಿ ಯಾವಾಗಲೂ ಸಹಿಸುವುದಿಲ್ಲ, ಈ ಘಟನೆಗೆ
ಕ್ಷಮೆ ಕೇಳುತ್ತೇವೆ ಎಂದು ಅದು ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next