Advertisement

ಅಲಹಾಬಾದ್‌ನ ಪ್ರಶಾಂತ್‌ ಮಿಶ್ರಾ ರಚಿಸಿದ ವಿನ್ಯಾಸ : ಲೋಕಪಾಲಕ್ಕೆ ಚಿಹ್ನೆ, ಧ್ಯೇಯವಾಕ್ಯ

09:35 AM Nov 28, 2019 | Hari Prasad |

ಹೊಸದಿಲ್ಲಿ: ದೇಶದ ಮೊದಲ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ಲೋಕಪಾಲಕ್ಕೆ ಹೊಸ ಚಿಹ್ನೆ (ಲೋಗೋ), ಧ್ಯೇಯ ವಾಕ್ಯ ಸಿಕ್ಕಿದೆ. ಕೇಂದ್ರ ಸಿಬಂದಿ ಖಾತೆಯೇ ಸ್ವತಃ ಧ್ಯೇಯ ವಾಕ್ಯ ರೂಪಿಸಿದೆ. ಚಿಹ್ನೆಯನ್ನು ಜನರಿಂದ ಬಂದಿರುವುದನ್ನು ಆಯ್ಕೆ ಮಾಡಲಾಗಿದೆ. ಆರು ಸಾವಿರಕ್ಕೂ ಅಧಿಕ ಧ್ಯೇಯ ವಾಕ್ಯಕ್ಕಾಗಿನ ಪ್ರತಿಕ್ರಿಯೆಗಳಲ್ಲಿ ಯಾವುದೂ ತೃಪ್ತಿಕರವಾಗಿ ಇರಲಿಲ್ಲ. ಮೂರು ಹಂತಗಳಲ್ಲಿ ಅವುಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಅಲಹಾಬಾದ್‌ನ ಪ್ರಶಾಂತ್‌ ಮಿಶ್ರಾ ಎಂಬುವರು ವಿನ್ಯಾಸಗೊಳಿಸಿದ ಚಿಹ್ನೆಯನ್ನು ಪರಿಗಣಿಸಲಾಯಿತು.

Advertisement

ಹೇಗಿದೆ ಚಿಹ್ನೆ?: ‘ಲೋಕ’ ಎಂದರೆ ಜನರು, ‘ಪಾಲ್‌’ ಎಂದರೆ ‘ಜನರ ರಕ್ಷಕ’. ಹೀಗಾಗಿ ‘ಜನರ ರಕ್ಷಕ’ ಎಂದು ವಿನ್ಯಾಸಕಾರ ಮಿಶ್ರಾ ಹೇಳಿದ್ದಾರೆ. ಅದರಲ್ಲಿ ಒಂಬುಡ್ಸ್‌ಮನ್‌, ಜನರು (ಮೂರು ಮುಖಗಳು ಇವೆ), ಜಾಗೃತವಾಗಿರುವುದು (ಅಶೋಕ ಚಕ್ರದ ಕಣ್ಣಿನ ಗೊಂಬೆ), ಕಾನೂನು (ಕಿತ್ತಳೆ ಬಣ್ಣದಲ್ಲಿರುವ ಪುಸ್ತಕ), ನ್ಯಾಯಾಂಗ (ಎರಡೂ ಕೈಗಳಲ್ಲಿ ತ್ರಿವರ್ಣಗಳ ಮೂಲಕ ವಿಶೇಷ ರೀತಿಯಲ್ಲಿ ಹಿಡಿದುಕೊಂಡಿರುವ ವ್ಯವಸ್ಥೆ) ಇದೆ ಎಂದಿದ್ದಾರೆ.

ಧ್ಯೇಯ ವಾಕ್ಯ: ‘ಮತ್ತೂಬ್ಬರ ಸಂಪತ್ತಿನ ಮೇಲೆ ದುರಾಸೆಪಡುವುದು ಬೇಡ’ ಎಂಬ ಈಶಾಬಸೋಪನಿಷತ್‌ನ ಶ್ಲೋಕದಿಂದ ಅದನ್ನು ಆಯ್ದುಕೊಳ್ಳಲಾಗಿದೆ. ಕಳೆದ ತಿಂಗಳ 19ರಂದು ನಡೆದಿದ್ದ ಸಭೆಯಲ್ಲಿ ಬಂದಿರುವ ಆರು ಸಾವಿರ ಪ್ರತಿಕ್ರಿಯೆಗಳಲ್ಲಿ ಯಾವುದೂ ಸರಿ ಹೊಂದದೇ ಇರುವುದರಿಂದ ಸಚಿವಾಲಯ ಮಟ್ಟದಲ್ಲಿಯೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next