Advertisement

ಕ್ರಿಕೆಟ್ ಸಲಹಾ ಸಮಿತಿಗೆ ರಾಜೀನಾಮೆ ನೀಡಿದ ಅಂಶುಮಾನ್ ಗಾಯಕ್ವಾಡ್

09:35 AM Oct 04, 2019 | Team Udayavani |

ಹೊಸದಿಲ್ಲಿ: ಮಾಜಿ ನಾಯಕ ಕಪಿಲ್ ದೇವ್ ಅವರು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಗೆ ರಾಜೀನಾಮೆ ನೀಡಿದ ಬೆನ್ನಲ್ಲೆ ಮತ್ತೊಬ್ಬ ಸದಸ್ಯ ಅಂಶುಮಾನ್ ಗಾಯಕ್ವಾಡ್ ಕೂಡಾ ರಾಜೀನಾಮೆ ನೀಡಿದ್ದಾರೆ.

Advertisement

ಅಂಶುಮಾನ್ ಗಾಯಕ್ವಾಡ್ ಅವರು ಬುಧವಾರ ಬಿಸಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೋಹ್ರಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

ಭಾರತ ಪುರುಷರ ತಂಡಕ್ಕೆ ಮುಖ್ಯ ತರಬೇತುದಾರರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ಬಿಸಿಸಿಐ ರಚಿಸಿತ್ತು. ಕಪಿಲ್ ದೇವ್ ನೇತೃತ್ವದ ಸಮಿತಿಯಲ್ಲಿ ಶಾಂತಾ ರಂಗಸ್ವಾಮಿ ಮತ್ತು ಅಂಶುಮಾನ್ ಗಾಯಕ್ವಾಡ್ ಸದಸ್ಯರಾಗಿದ್ದರು.

ಆದರೆ ಈ ಸಮಿತಿಯ ಮೂವರು ಸದಸ್ಯರ ಮೇಲೂ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಬಂದ ನಂತರ ಕಪಿಲ್ ಮತ್ತು ಶಾಂತಾ ರಂಗಸ್ವಾಮಿ ರಾಜೀನಾಮೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next