Advertisement

ಕೃಷ್ಣಾನದಿಯಲ್ಲಿ ತೆಪ್ಪ ಮಗುಚಿದ ಪ್ರಕರಣ: ಕಾಣೆಯಾಗಿದ್ದ ನಾಲ್ವರಲ್ಲಿ ಮೂರನೇ ಶವ ಪತ್ತೆ

01:25 PM Aug 20, 2020 | keerthan |

ರಾಯಚೂರು: ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದ ನಾಲ್ವರಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಕೃಷ್ಣ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿ ತೆಪ್ಪ ಮುಳುಗಡೆಯಾಗಿ ನಾಲ್ವರು ಕೊಚ್ಚಿ ಹೋಗಿದ್ದರು.

Advertisement

ಘಟನೆಯಲ್ಲಿ ಆರು ವರ್ಷದ ಬಾಲಕಿ ಹಾಗು ಮೂವರು ಮಹಿಳೆಯರು ಕೊಚ್ಚಿ ಹೋಗಿದ್ದರೆ ಒಂಬತ್ತು ಜನ ಈಜಿ ದಡ ಸೇರಿ ಬದುಕುಳಿದಿದ್ದರು.

ಬುಧವಾರ ಜುರಾಲಾ ಬಳಿ ಇಬ್ಬರು ಮಹಿಳೆಯರ ಶವ ಪತ್ತೆಯಾಗಿತ್ತು. ಇಂದು ನರಸಮ್ಮ ಎಂಬುವವರ ಶವ ಸಿಕ್ಕಿದೆ. ಆರು ವರ್ಷದ ಬಾಲಕಿ ದೇಹಕ್ಕಾಗಿ ಇನ್ನೂ ಶೋಧ ಕಾರ್ಯ ಮುಂದುವರಿದಿದೆ. ಎಲ್ಲಾ ದೇಹಗಳು ಪ್ರಿಯದರ್ಶಿನಿ ಜುರಾಲಾ ಜಲಾಶಯದಲ್ಲಿಯೇ ಸಿಕ್ಕಿವೆ.

Advertisement

Udayavani is now on Telegram. Click here to join our channel and stay updated with the latest news.

Next