Advertisement

ಅದ್ಧೂರಿಯಾಗಿ ನಡೆಯಿತು ಅನೂಪ್‌ ವಿವಾಹ

11:01 AM Feb 20, 2018 | |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಪುತ್ರ ಅನೂಪ್‌ ಅವರ ವಿವಾಹ ಸೋಮವಾರ ಅದ್ಧೂರಿಯಾಗಿ ನಡೆಯಿತು. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ನಿರ್ದೇಶಕರು ವಿವಾಹದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಕೋರಿದರು. ಇನ್ನು ಭಾನುವಾರ ಇಬಿಸು ಕನ್ವೆನ್ಷನಲ್‌ ಹಾಲ್‌ನಲ್ಲಿ ಅದ್ಧೂರಿಯಾಗಿ ಅನೂಪ್‌-ಮೇಘನಾ ವಿವಾಹ ಆರತಕ್ಷತೆ ನಡೆದಿದ್ದು, ಕನ್ನಡ ಚಿತ್ರರಂಗದ ಹಾಗೂ ರಾಜಕೀಯ ಕ್ಷೇತ್ರದ ಅನೇಕರು ಭಾಗಿಯಾಗಿ ನವಜೋಡಿಯನ್ನು ಹರಸಿದರು.

Advertisement

ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ಎಚ್‌.ಎಂ.ರೇವಣ್ಣ, ರಾಮಲಿಂಗ ರೆಡ್ಡಿ, ಕೃಷ್ಣೇಬೈರೇಗೌಡ, ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌, ಕರವೇ ಅಧ್ಯಕ್ಷ ನಾರಾಯಣ ಗೌಡ, ನಟರಾದ ಪುನೀತ್‌ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ದೇವರಾಜ್‌, ಮುರುಳಿ, ರಮೇಶ್‌ ಅರವಿಂದ್‌, ದುನಿಯಾ ವಿಜಯ್‌, ನಟಿ ಮಾಲಾಶ್ರೀ, ನಿರ್ಮಾಪಕ ರಾಮು, ನಟಿ ಪ್ರೇಮಾ ಸೇರಿದಂತೆ ಚಿತ್ರರಂಗದ ಅನೇಕರು ವಿವಾಹ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು ಚಿತ್ರರಂಗದ ಮಂದಿ ಕೂಡಾ ವಿವಾಹದಲ್ಲಿ ಪಾಲ್ಗೊಂಡು ನವಜೋಡಿಗೆ ಶುಭಕೋರಿದರು. ಅನೂಪ್‌ ಸಾ.ರಾ.ಗೋವಿಂದು “ಡವ್‌’, “ಮಿಸ್ಟರ್‌ ಪಫೆಕ್ಟ್’ ಚಿತ್ರಗಳಲ್ಲಿ ನಟಿಸಿದ್ದು, ಸದ್ಯ “ಸಾಗುವ ದಾರಿಯಲ್ಲಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಗುರುಪ್ರಸಾದ್‌ ನಿರ್ದೇಶನದ “ಅದೇಮಾ’ ಚಿತ್ರಕ್ಕೂ ಅನೂಪ್‌ ನಾಯಕ. 

Advertisement

Udayavani is now on Telegram. Click here to join our channel and stay updated with the latest news.

Next