Advertisement

ಕೊರೊನಾ ಸಂಕಷ್ಟದಲ್ಲೂ ಮಾತೃಭೂಮಿಯ ಸೇವೆ ಅನನ್ಯ: ರತ್ನಾಕರ ಶೆಟ್ಟಿ  ಮುಂಡ್ಕೂರು

03:18 PM Oct 02, 2021 | Team Udayavani |

ಮುಂಬಯಿ: ಜಗತ್ತಿಗೆ ಆವರಿಸಿ ರುವ ಕೊರೊನಾ ಸಂಕಟದ ಸಮಯ ದಲ್ಲಿ  ಮಾತೃಭೂಮಿ ಕೋ- ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ತಮ್ಮ ಗ್ರಾಹ ಕರ ಅಗತ್ಯಕ್ಕೆ ಅನುಸಾರವಾಗಿ ಸಹಾಯ ಮಾಡಿದೆ. ಠೇವಣಿದಾರರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯವಿರುವ ವರಿಗೆ ತತ್‌ಕ್ಷಣದಲ್ಲಿಯೇ ಹಣ ನೀಡಿ ಅವರ ಸಮಸ್ಯೆ ನಿವಾರಿಸುವಲ್ಲಿ  ನಾವು ಯಶಸ್ವಿಯಾಗಿ ದ್ದೇವೆ. ಎಲ್ಲೆಡೆ ಕೊರೊನಾ  ಲಾಕ್‌ಡೌನ್‌ ನಿರ್ಬಂಧಗಳು ಇರುವಾ ಗಲೂ ಸೊಸೈಟಿಯ ಸಿಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಗ್ರಾಹಕರಿಗೆ ಯಾವುದೇ ರೀತಿಯ ಅನಾನುಕೂಲತೆ ಯಾಗದಂತೆ ತಮ್ಮ ಸೇವೆಯಲ್ಲಿ  ನಿರತರಾ ಗಿದ್ದರು ಎಂದು ಮಾತೃಭೂಮಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ  ಮುಂಡ್ಕೂರು ತಿಳಿಸಿದರು.

Advertisement

ಸೆ. 30ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಿದ ಬಂಟರ ಸಂಘ ಮುಂಬಯಿ ಸಂಚಾಲಿತ ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 33ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದ ಪ್ರಸ್ತುತ ದಿನಗಳಲ್ಲಿ ಬ್ಯಾಂಕ್‌ನ ವ್ಯವಹಾರಗಳು ಪ್ರತಿಯೊಬ್ಬರು ಮನೆಯಲ್ಲಿ ಅಥವಾ ಕಚೇರಿಯಲ್ಲಿ  ಕುಳಿತು ನಿರ್ವಹಿಸುವಂತಾಗಿದೆ. ಮಾತೃಭೂಮಿ ಕೋ-ಆಪರೇಟಿವ್‌ ಸೊಸೈಟಿ ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ. ಹೊಟೇಲ್‌ ಉದ್ಯಮ ಸಹಿತ ಉದ್ಯಮ ರಂಗದ ಬೆಳವಣಿಗೆಯಲ್ಲಿ ಮತೃಭೂಮಿ ಉತ್ತಮವಾದ ಕೊಡುಗೆ ನೀಡುತ್ತಾ ಬಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ಸಂತೃಪ್ತಿ ನಮಗಿದೆ ಎಂದು ತಿಳಿಸಿ ಗ್ರಾಹಕರಿಗೆ ಶೇ. 11ರಷ್ಟು ಡಿವಿಡೆಂಟ್‌ ಘೋಷಿಸಿದರು. ಸೊಸೈಟಿಯನ್ನು ಮತ್ತಷ್ಟು ಬಲಪಡಿಸುವಲ್ಲಿ ನಾವೆಲ್ಲರು ಒಂದಾಗಿ ಮುನ್ನಡೆಯೋಣ. ಗ್ರಾಹಕರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ತಿಳಿಸಿ ಸಿಬಂದಿ ಸೇವೆಯನ್ನು ಅಭಿನಂದಿಸಿದರು.

ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ರಮೇಶ್‌ ಎ. ಶೆಟ್ಟಿ  ಪ್ರಸ್ತಾವಿಸಿ, ಕಾರ್ಯಾಧ್ಯಕ್ಷರು ಹಾಗೂ ನಿರ್ದೇಶಕರನ್ನು ವೇದಿಕೆಗೆ ಬರಮಾಡಿ ಕೊಂಡು ಸೊಸೈಟಿಯ ಸಾಧನೆಗಳನ್ನು ವಿವರಿಸಿದರು. ಸೊಸೈಟಿಯ ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ ವಾರ್ಷಿಕ ವರದಿಯನ್ನು ಮಂಡಿಸಿ, ತನ್ನದೇ ಆದ ಸ್ಥಾನಮಾನದಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುತ್ತಾ ಜನಮನ್ನಣೆ ಗಳಿಸಿರುವ ಸೊಸೈಟಿಯು ಗ್ರಾಹಕ ಸ್ನೇಹಿ ಸೊಸೈಟಿಯಾಗಿ ಪ್ರಸಿದ್ಧಿಯಾಗಿದೆ ಎಂದರು.

ಸಭಿಕರ ಪರವಾಗಿ ಜಯ ಎ. ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ, ಸಿಎ ಐ. ಆರ್‌. ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ  ಪದ್ಮನಾಭ ಪಯ್ಯಡೆ, ಮುಂಡಪ್ಪ ಎಸ್‌. ಪಯ್ಯಡೆ ಮೊದಲಾದವರು ಸಲಹೆ- ಸೂಚನೆ ನೀಡಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮುರಳಿ ಕೆ. ಶೆಟ್ಟಿ, ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಉಪಾಧ್ಯಕ್ಷ ಉಳೂ¤ರು ಮೋಹನ್‌ ದಾಸ್‌ ಶೆಟ್ಟಿ, ಆಡಳಿತ ಮಂಡಳಿಯ ನಿರ್ದೇಶಕರಾದ ಡಾ| ಆರ್‌. ಕೆ. ಶೆಟ್ಟಿ, ಉಮಾ ಕೆ. ಶೆಟ್ಟಿ, ಸುಜಾತಾ ಗುಣಪಾಲ್‌ ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬೊಳ ಮೊದಲಾದವರು ಉಪಸ್ಥಿತರಿದ್ದರು.

Advertisement

ಸೊಸೈಟಿಯ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ವಿವಿಧ ಶಾಖೆಗಳ ಸಿಬಂದಿಯನ್ನು ಅಭಿನಂದಿಸಿ ಗೌರವಿಸಲಾಯಿತು. ಉಪಾಧ್ಯಕ್ಷ ಉಳ್ತೂರು ಮೋಹನ್‌ ದಾಸ್‌ ಶೆಟ್ಟಿ ವಂದಿಸಿದರು.

ಸೊಸೈಟಿಯ ಆರ್ಥಿಕ ಸಾಧನೆ:

2021ರ ಮಾ. 31ರ ವರೆಗಿನ ಆರ್ಥಿಕ ಸೂಕ್ಷ್ಮಾವಲೋಕನದಂತೆ ಮಾತೃಭೂಮಿಯ ಶೇರು ಬಂಡವಾಳ 2,370.32 ಲಕ್ಷ ರೂ. ಗಳಿಗೆ ಏರಿಕೆಯಾಗಿದ್ದು, ಒಟ್ಟು ಸಂಗ್ರಹ 2,340.16 ಲಕ್ಷ ರೂ., ಒಟ್ಟು ಠೇವಣಿ 8,020.34 ಲಕ್ಷ ರೂ. ಗಳಿಗೆ ಏರಿಕೆಯಾಗಿದೆ. ಒಟ್ಟು ಮುಂಗಡ ಮೊತ್ತ 9,791.20 ಲಕ್ಷ ರೂ., ವರ್ಕಿಂಗ್‌ ಕ್ಯಾಪಿಟಲ್‌ 13,565.86 ಲಕ್ಷ ರೂ., ನಿವ್ವಳ ಲಾಭ 324.31 ಲಕ್ಷ ರೂ. ಗಳಿಗೆ ವೃದ್ಧಿಯಾಗಿದೆ. 105.09 ಲಕ್ಷ ರೂ. ಎನ್‌ಪಿಎ ಮೀಸಲಿಟ್ಟು ವಿಶೇಷ ಸಾಧನೆಗೈದಿದೆ.

ಕಾರ್ಯವ್ಯಾಪ್ತಿ ವಿಸ್ತರಣೆ:

ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಮುಂಬಯಿ ಮಹಾನಗರ ಹಾಗೂ ಉಪನಗರಗಳಾದ ಸಾಕಿನಾಕಾ, ಥಾಣೆ, ನಲಸೋಪರ, ಖಾರ್ಘ‌ರ್‌, ಕಲ್ಯಾಣ್‌, ಪುಣೆ, ನಾಸಿಕ್‌, ರಾಯಗಢ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಈ ಎಲ್ಲ ಶಾಖೆಗಳಿಗೆ ಮಾತೃಭೂಯಿ ಆಡಳಿತವು ಈಗಾಗಲೇ ಸ್ವತಂತ್ರ ಅಧಿಕಾರವನ್ನು ನೀಡಿರುವುದಲ್ಲದೆ, ಯಾವುದೇ ಬ್ಯಾಂಕ್‌ ಗ್ರಾಹಕರಿಗೆ ನೀಡುವ ಸೇವೆಗೆ ಅನುಗುಣವಾಗಿ ಸಂಪೂರ್ಣ ಸೇವೆ ಒದಗಿಸಲು ಶಾಖೆಗಳಿಗೆ ಸ್ವಾಯತ್ತತೆ ಕಲ್ಪಿಸಿಕೊಡಲಾಗಿದೆ.

ಕಳೆದ ಒಂದೂವರೆ ವರ್ಷದಿಂದ ಉದ್ದಿಮೆ ರಂಗದಲ್ಲಿ ಅದರಲ್ಲೂ ಹೊಟೇಲ್‌ ಉದ್ಯಮದಲ್ಲಿ ತುಳು-ಕನ್ನಡಿಗರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲೂ ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯ ಚಟುವಟಿಕೆಗಳು ಉತ್ತಮವಾಗಿತ್ತು. ಅವರು ಗ್ರಾಹಕರಿಗೆ ನೀಡಿದ ಸೇವೆಯೊಂದಿಗೆ ಸಂಸ್ಥೆಗೂ ಉತ್ತಮ ಲಾಭಾಂಶ ತಂದಿದ್ದಾರೆ. ಇದಕ್ಕಾಗಿ ನಾನು ಆಡಳಿತ ಮಂಡಳಿ ಹಾಗೂ ಸಿಬಂದಿಯನ್ನು ಅಭಿನಂದಿಸುತ್ತೇನೆ. ಮಾತೃಭೂಮಿ ಕ್ರೆಡಿಟ್‌ ಸೊಸೈಟಿಯ ಎಲ್ಲ ಸೌಲಭ್ಯಗಳು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸೋಣ.-ಚಂದ್ರಹಾಸ್‌ ಕೆ. ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮುಂಬಯಿ

-ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next