Advertisement

ಖಾಸಗಿ ಬಸ್ ನೌಕರರಿಗೂ ವಿಶೇಷ ಪ್ಯಾಕೇಜ್ ಘೋಷಿಸಿ: ಐವನ್ ಡಿಸೋಜಾ

05:01 PM May 09, 2020 | keerthan |

ಮಂಗಳೂರು: ನೇಕಾರರಿಗೆ, ಹೂ ಬೆಳೆಗಾರರಿಗೆ, ಆಟೋ ರಿಕ್ಷಾ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದಂತೆ ಖಾಸಗಿ ಬಸ್ ನೌಕರರಿಗೂ ಪ್ಯಾಕೇಜ್ ಘೋಷಿಸುವಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಒತ್ತಾಯಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಶೇಕಡಾ 75ರಷ್ಟು ಭಾಗಗಳಲ್ಲಿ ಬಸ್ ಸಂಚರಿಸುತ್ತಿದ್ದು ಸುಮಾರು 30 ಸಾವಿರ ನೌಕರರು ಚಾಲಕ, ಕಂಡಕ್ಟರ್, ಕ್ಲೀನರ್ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇವರು ದಿನಗೂಲಿ ನೌಕರರರಾಗಿದ್ದು, ಇವರಿಗೆ ತಿಂಗಳ ಸಂಬಳ ದೊರೆಯುವುದಿಲ್ಲ. ಹಾಗಾಗಿ ಕೆಲಸಕ್ಕೆ ಹಾಜರಾದರೆ ಮಾತ್ರೆ ಸಂಬಳ ಸಿಗುತ್ತದೆ. ಲಾಕ್ ಡೌನ್ ಕಾರಣದಿಂದ ಕಳೆದ 50 ದಿನಗಳಿಂದ ಇವರಿಗೆ ಯಾವುದೇ ತರಹದ ಸಂಬಳ ಸಿಕ್ಕಿರುವುದಿಲ್ಲ. ಹಾಗಾಗಿ ಅವರ ಜೀವನ ಸಂಕಷ್ಟದಲ್ಲಿದ್ದು, ಅವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next